News Karnataka Kannada
Tuesday, May 07 2024
ದೇಶ

ವಿನಾಯಕನ ಚೌತಿ ದಿನವೇ ಹೊಸ ಸಂಸತ್‌ ಭವನದಲ್ಲಿ ಕಲಾಪ ಆರಂಭ

Samsath
Photo Credit : News Kannada

ಹೊಸದಿಲ್ಲಿ: ವಿಘ್ನ ವಿನಾಯಕನ ಚೌತಿ ದಿನವೇ ಹೊಸ ಸಂಸತ್‌ ಭವನದಲ್ಲಿ ಕಲಾಪ ಆರಂಭವಾಗಲಿದೆ. ಇದೇ ತಿಂಗಳ 18ರಿಂದ 5 ದಿನಗಳ ಕಾಲ ವಿಶೇಷ ಅಧಿವೇಶನ ನಡೆಯಲಿದೆ. ಸೆ. 19ರಂದು ವಿನಾಯಕ ಚತುರ್ಥಿ. ಅಂದೇ ಉಭಯ ಸದನಗಳ ಕಲಾಪವು ನೂತನ ಸಂಸತ್‌ ಭವನಕ್ಕೆ ಸ್ಥಳಾಂತರವಾಗಲಿದೆ.

ಅದೇ ಉದ್ದೇಶ ಕೇಂದ್ರ ಸರಕಾರ ಕ್ಕಿದೆ. ಸೆ.18ರಂದು ಮೊದಲ ದಿನದ ಕಾರ್ಯ ಕಲಾಪಗಳು ಹಳೆಯ ಸಂಸತ್‌ ಕಟ್ಟಡದಲ್ಲೇ ನಡೆಯಲಿದೆ. ಹೊಸ ಆರಂಭಕ್ಕೆ ಪವಿತ್ರವಾದ ದಿನ ಎಂದೇ ಪರಿಗಣಿಸಲಾದ ಚೌತಿಯ ದಿನ ಹೊಸ ಭವನದಲ್ಲಿ ಕಲಾಪ ನಡೆಯಲಿದೆ ಎನ್ನುತ್ತವೆ ಮೂಲಗಳು.

ವಿಶೇಷ ಅಧಿವೇಶನವು 18ರಿಂದ 22ರ  ವರೆಗೆ ನಡೆಯಲಿದೆ. ಕಳೆದ ಗುರು ವಾರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಷಿಯವರು ಈ ಕುರಿತು ಘೋಷಿ ಸಿದ್ದರು. ಆದರೆ ಈ ಅಧಿವೇಶನ ಕರೆಯಲು ಕಾರಣವೇನು, ಕಾರ್ಯ ಸೂಚಿ ಯೇನು ಎಂಬುದನ್ನು ಸರಕಾರ ಇನ್ನೂ ಬಹಿರಂಗ ಪಡಿಸಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು