ಹೊಸದಿಲ್ಲಿ: ವಿಘ್ನ ವಿನಾಯಕನ ಚೌತಿ ದಿನವೇ ಹೊಸ ಸಂಸತ್ ಭವನದಲ್ಲಿ ಕಲಾಪ ಆರಂಭವಾಗಲಿದೆ. ಇದೇ ತಿಂಗಳ 18ರಿಂದ 5 ದಿನಗಳ ಕಾಲ ವಿಶೇಷ ಅಧಿವೇಶನ ನಡೆಯಲಿದೆ. ಸೆ. 19ರಂದು ವಿನಾಯಕ ಚತುರ್ಥಿ. ಅಂದೇ ಉಭಯ ಸದನಗಳ ಕಲಾಪವು ನೂತನ ಸಂಸತ್ ಭವನಕ್ಕೆ ಸ್ಥಳಾಂತರವಾಗಲಿದೆ.
ಅದೇ ಉದ್ದೇಶ ಕೇಂದ್ರ ಸರಕಾರ ಕ್ಕಿದೆ. ಸೆ.18ರಂದು ಮೊದಲ ದಿನದ ಕಾರ್ಯ ಕಲಾಪಗಳು ಹಳೆಯ ಸಂಸತ್ ಕಟ್ಟಡದಲ್ಲೇ ನಡೆಯಲಿದೆ. ಹೊಸ ಆರಂಭಕ್ಕೆ ಪವಿತ್ರವಾದ ದಿನ ಎಂದೇ ಪರಿಗಣಿಸಲಾದ ಚೌತಿಯ ದಿನ ಹೊಸ ಭವನದಲ್ಲಿ ಕಲಾಪ ನಡೆಯಲಿದೆ ಎನ್ನುತ್ತವೆ ಮೂಲಗಳು.
ವಿಶೇಷ ಅಧಿವೇಶನವು 18ರಿಂದ 22ರ ವರೆಗೆ ನಡೆಯಲಿದೆ. ಕಳೆದ ಗುರು ವಾರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿಯವರು ಈ ಕುರಿತು ಘೋಷಿ ಸಿದ್ದರು. ಆದರೆ ಈ ಅಧಿವೇಶನ ಕರೆಯಲು ಕಾರಣವೇನು, ಕಾರ್ಯ ಸೂಚಿ ಯೇನು ಎಂಬುದನ್ನು ಸರಕಾರ ಇನ್ನೂ ಬಹಿರಂಗ ಪಡಿಸಿಲ್ಲ.