ನವದೆಹಲಿ: ಹೊಸ ಸಂಸತ್ ಕಟ್ಟಡದಲ್ಲಿ ಗಣೇಶ ಚತುರ್ಥಿಯ ಬಳಿಕ ಅಧಿವೇಶನ ನಡೆಯಲಿದೆ. ಇದರ ಜೊತೆಗೆ ಸಂಸತ್ ಸಿಬ್ಬಂದಿಗೆ ಹೊಸ ಸಮವಸ್ತ್ರ ನೀಡಲಾಗುತ್ತದೆ ಎಂಬ ಸುದ್ದಿಯೂ ಇದೆ. ಈ ವಿಚಾರವೇ ಇದೀಗ ವಿವಾದಕ್ಕೆ ಕಾರಣವಾಗಿದೆ.
ಸಂಸತ್ ಸಿಬ್ಬಂದಿಯ ಹೊಸ ಸಮವಸ್ತ್ರದ ಮೇಲೆ ಆಡಳಿತ ಪಕ್ಷದ ಚುನಾವಣಾ ಚಿಹ್ನೆ ‘ಕಮಲ’ ಮುದ್ರಿಸಲಾಗಿದೆ ಎಂಬ ವರದಿಗಳ ನಡುವೆ ಬಿಜೆಪಿ ಸಂಸತ್ತನ್ನು ಏಕಪಕ್ಷೀಯವಾಗಿ ಮಾಡುತ್ತಿದೆ ಎಂದು ಕಾಂಗ್ರೆಸ್ ಮಂಗಳವಾರ ಆರೋಪಿಸಿದೆ.
ಈ ಕುರಿತು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು, ಸಂಸತ್ತನ್ನು ಏಕಪಕ್ಷದ ಸೊತ್ತಾಗಿ ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಹೇಳಿದೆ.
ಈ ಕುರಿತು #NewDressforParliamentStaff” ಹ್ಯಾಷ್ ಟ್ಯಾಗ್ ಬಳಸಿ ಎಕ್ಸ್ ಖಾತೆಯಲ್ಲಿ ಬಿಜೆಪಿ ಪ್ರಶ್ನಿಸಿರುವ ಟ್ಯಾಗೋರ್, ‘ಕಮಲ ಮಾತ್ರ ಏತಕ್ಕೆ? ನವಿಲು ಅಥವಾ ಹುಲಿ ಏಕೆ ಇಲ್ಲ? ಓಹ್, ಅವುಗಳು ಬಿಜೆಪಿ ಪಕ್ಷದ ಚುನಾವಣಾ ಚಿಹ್ನೆ ಅಲ್ಲ. ಯಾಕೆ ಈ ಪತನ ಸರ್ ಓಂ ಬಿರ್ಲಾ ಎಂದು ಪ್ರಶ್ನಿಸಿದ್ದಾರೆ. ಕಳೆದ ಸಂಸತ್ ಅಧಿವೇಶನದಲ್ಲಿ ಮಣಿಪುರ ವಿಚಾರದಲ್ಲಿ ಪ್ರಧಾನಿ ಹೇಳಿಕೆಗೆ ಒತ್ತಾಯಿಸಿ ಕಾಂಗ್ರೆಸ್ ತೀವ್ರ ಹೋರಾಟ ನಡೆಸಿತ್ತು. ಈ ಅಧಿವೇಶನದಲ್ಲಿ ಸಮವಸ್ತ್ರ ವಿಚಾರವೂ ಕೈ ಹೋರಾಟಕ್ಕೆ ಕಾರಣವಾಗುವ ಎಲ್ಲ ಲಕ್ಷಣಗಳಿವೆ.
Why lotus only?
why can’t peacock 🦚 or why can’t tiger 🐅 ?Oh they’re not BJP party election symbol🙄
Why this fall sir @ombirlakota ? #NewDressforParliamentStaff https://t.co/MHP487PCmd
— Manickam Tagore .B🇮🇳✋மாணிக்கம் தாகூர்.ப (@manickamtagore) September 12, 2023