ನವದೆಹಲಿ: ಯೋಗ ಗುರು ರಾಮ್ದೇವ್ ಮತ್ತು ಅವರ ಕಂಪನಿ ಪತಂಜಲಿ ಆಯುರ್ವೇದದ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರು ಸುಪ್ರೀಂ ಕೋರ್ಟ್ಗೆ ಬೇಷರತ್ ಕ್ಚಮೆ ಕೇಳಿದ್ದಾರೆ.
ತಮ್ಮ ಪತಂಜಲಿ ಪತಂಜಲಿ ಉತ್ಪನ್ನಗಳ ದಾರಿತಪ್ಪಿಸುವ ಜಾಹಿರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಇವರು ಕೋರ್ಟ್ಗೆ ಸಲ್ಲಿಕೆ ಮಾಡಿದ್ದ ಅಸ್ಪಷ್ಟ ಮತ್ತು ಅಸಂಬದ್ಧ ಅಫಿಡವಿಟ್ ನಿಂದ ಕೋರ್ಟ್ ಅಸಮಧಾನಗೊಂಡಿತ್ತು ಹಾಗೂ ಒಂದು ವಾರದೊಳಗೆ ಸರಿಯಾದ ಅಫಿಡವಿಟ್ ಸಲ್ಲಿಸಲು ಕೊನೆಯ ಅವಕಾಶ ನೀಡಿತ್ತು.
ಇನ್ನು ತಮ್ಮ ಜಾಹೀರಾತಿನಲ್ಲಿ ಯಾವುದೇ ತಪ್ಪು ಹಾಗೂ ವೈದ್ಯಕೀಯ ಪದ್ಧತಿಯ ವಿರುದ್ಧ ಯಾವುದೇ ಸಾಂದರ್ಭಿಕ ಹೇಳಿಕೆಗಳನ್ನು ಯಾವುದೇ ರೂಪದಲ್ಲಿ ಪ್ರಕಟಿಸುವುದಿಲ್ಲ ” ಎಂದು ಅದು ಭರವಸೆ ನೀಡಿತ್ತು.
ಆದರೆ ನೀಡಿದ ಭರವಸೆಯನ್ನು ಪಾಲಿಸದಿದ್ದಕ್ಕಾಗಿ ಸುಪ್ರಿಂ ಕೋರ್ಟ್ ಮುಂದೆ ಯೋಗ ಗುರು ಬಾಬಾ ರಾಮ್ ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಬೇಷರತ್ ಕ್ಷಮೆಯಾಚಿಸಿದ್ದಾರೆ. ಕ್ಷಮೆಯಾಚನೆಯನ್ನು ಶನಿವಾರವೇ ಸಲ್ಲಿಸಲಾಗಿದ್ದು, ಸುಪ್ರೀಂ ಕೋರ್ಟ್ ಈ ವಿಷಯವನ್ನು ನಾಳೆ ಮತ್ತೆ ವಿಚಾರಣೆಗೆ ತೆಗೆದುಕೊಳ್ಳಲಿದೆ ಎಂದು ಹೇಳಲಾಗಿದೆ.
Baba Ramdev tenders unconditional apology before Supreme Court over Patanjali ads targetting modern medicine; tenders unqualified apology for November 2023 press conference as well
Patanjali and its MD Acharya also tender fresh apologies; say committed to upholding the majesty… pic.twitter.com/b8jI0YOptT
— Bar and Bench (@barandbench) April 9, 2024