ದೆಹಲಿ: ಹಿಂಸಾಚಾರ ಪೀಡಿತ ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಪ್ರತ್ಯೇಕ ಘಟನೆಗಳಲ್ಲಿ ಓರ್ವ ನಾಗರಿಕ ಮತ್ತು ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಅದೇ ರೀತಿ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಷ್ಣುಪುರ್ ಜಿಲ್ಲೆಯ ಫೌಗಕ್ಚಾವೊ ಇಖೈ, ಅವಾಂಗ್ ಲೈಕೈ ಮತ್ತು ಕ್ವಾಕ್ತಾ ಪ್ರದೇಶಗಳಲ್ಲಿ ಶಸ್ತ್ರಸಜ್ಜಿತ ದಾಳಿಕೋರರು ಗುಂಡು ಹಾರಿಸಿ ಒಬ್ಬ ನಾಗರಿಕನನ್ನು ಕೊಂದಿದ್ದಾರೆ. ಘಟನೆಯಲ್ಲಿ ಓರ್ವ ಗಾಯಗೊಂಡಿದ್ದಾನೆ ಎಂದು ಇಂಫಾಲ್ನ ಅಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ಮೊಯಿರಾಂಗ್ ತುರೆಲ್ ಮಾಪನ್ ಮೀಟೆಯ್ ಗ್ರಾಮದಲ್ಲಿ ಶಂಕಿತ ಉಗ್ರಗಾಮಿಗಳು ಕ್ವಾಕ್ಟಾ ವಾರ್ಡ್ ನಂ 9 ರ ಮೇಲೆ ದಾಳಿ ನಡೆಸಿದಾಗ ಬಿಷ್ಣುಪುರ ಜಿಲ್ಲೆಯ ಮಣಿಪುರ ಪೊಲೀಸ್ ಕಮಾಂಡೋ ಪುಖಮ್ ರಣಬೀರ್ (39) ಸಾವನ್ನಪ್ಪಿದ್ದಾರೆ ಎಂದು ಇಂಫಾಲ್ನ ವರದಿಗಳು ತಿಳಿಸಿವೆ. ಆದರೆ ಅಧಿಕಾರಿಗಳು ಅದನ್ನು ಇನ್ನೂ ಖಚಿತಪಡಿಸಿಲ್ಲ. ಬಿಷ್ಣುಪುರದಲ್ಲಿ ಗುಂಡಿನ ದಾಳಿಯ ನಂತರ, ಪೊಲೀಸರು ಮತ್ತು ಅರೆಸೇನಾ ಪಡೆಗಳು ಇಬ್ಬರು ಸಶಸ್ತ್ರ ದಾಳಿಕೋರರನ್ನು ಕೊಂದಿದ್ದಾರೆ. ಕ್ವಾಕ್ಟಾದಲ್ಲಿರುವ ಬಂಕರ್ನಲ್ಲಿ ಕಾವಲುಗಾರ ಕಮಾಂಡೋವನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ವರದಿಗಳು ಹೇಳಿವೆ.