News Karnataka Kannada
Monday, May 13 2024
ದೆಹಲಿ

ಮಣಿಪುರದಲ್ಲಿ ಹಿಂಸಾಚಾರಕ್ಕೆ ಮತ್ತೆ ಮೂವರು ಬಲಿ

New Delhi: Pakistan has instigated the Nuh violence
Photo Credit : IANS

ದೆಹಲಿ: ಹಿಂಸಾಚಾರ ಪೀಡಿತ ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಪ್ರತ್ಯೇಕ ಘಟನೆಗಳಲ್ಲಿ ಓರ್ವ ನಾಗರಿಕ ಮತ್ತು ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಅದೇ ರೀತಿ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಷ್ಣುಪುರ್ ಜಿಲ್ಲೆಯ ಫೌಗಕ್ಚಾವೊ ಇಖೈ, ಅವಾಂಗ್ ಲೈಕೈ ಮತ್ತು ಕ್ವಾಕ್ತಾ ಪ್ರದೇಶಗಳಲ್ಲಿ ಶಸ್ತ್ರಸಜ್ಜಿತ ದಾಳಿಕೋರರು ಗುಂಡು ಹಾರಿಸಿ ಒಬ್ಬ ನಾಗರಿಕನನ್ನು ಕೊಂದಿದ್ದಾರೆ. ಘಟನೆಯಲ್ಲಿ ಓರ್ವ ಗಾಯಗೊಂಡಿದ್ದಾನೆ ಎಂದು ಇಂಫಾಲ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ಏತನ್ಮಧ್ಯೆ, ಮೊಯಿರಾಂಗ್ ತುರೆಲ್ ಮಾಪನ್ ಮೀಟೆಯ್ ಗ್ರಾಮದಲ್ಲಿ ಶಂಕಿತ ಉಗ್ರಗಾಮಿಗಳು ಕ್ವಾಕ್ಟಾ ವಾರ್ಡ್ ನಂ 9 ರ ಮೇಲೆ ದಾಳಿ ನಡೆಸಿದಾಗ ಬಿಷ್ಣುಪುರ ಜಿಲ್ಲೆಯ ಮಣಿಪುರ ಪೊಲೀಸ್ ಕಮಾಂಡೋ ಪುಖಮ್ ರಣಬೀರ್ (39) ಸಾವನ್ನಪ್ಪಿದ್ದಾರೆ ಎಂದು ಇಂಫಾಲ್‌ನ ವರದಿಗಳು ತಿಳಿಸಿವೆ. ಆದರೆ ಅಧಿಕಾರಿಗಳು ಅದನ್ನು ಇನ್ನೂ ಖಚಿತಪಡಿಸಿಲ್ಲ. ಬಿಷ್ಣುಪುರದಲ್ಲಿ ಗುಂಡಿನ ದಾಳಿಯ ನಂತರ, ಪೊಲೀಸರು ಮತ್ತು ಅರೆಸೇನಾ ಪಡೆಗಳು ಇಬ್ಬರು ಸಶಸ್ತ್ರ ದಾಳಿಕೋರರನ್ನು ಕೊಂದಿದ್ದಾರೆ. ಕ್ವಾಕ್ಟಾದಲ್ಲಿರುವ ಬಂಕರ್‌ನಲ್ಲಿ ಕಾವಲುಗಾರ ಕಮಾಂಡೋವನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ವರದಿಗಳು ಹೇಳಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು