News Karnataka Kannada
Friday, May 03 2024
ದೆಹಲಿ

ಅವರೆಂದು ಅಸಂಬದ್ಧ ನಿರ್ಧಾರ ಕೈಗೊಳ್ಳಲ್ಲ: ಭಾರತದ ಬೆನ್ನಿಗೆ ನಿಂತ ಬಾಂಗ್ಲಾ

They won't take an absurd decision: Bangladesh on India's backs
Photo Credit : IANS

ನವದೆಹಲಿ: ಭಾರತ ಕೆನಡಾದ ನಡುವಿನ ಸಂಬಂಧಗಳು ಹಳಸಿವೆ. ಉಭಯ ದೇಶಗಳು ರಾಜತಾಂತ್ರಿಕ ಸಂಬಂಧಗಳನ್ನು ಕಳೆದುಕೊಳ್ಳುವಷ್ಟರ ಮಟ್ಟಿಗೆ ಈ ಬೆಳವಣಿಗೆ ನಡೆದಿದೆ. ಈ ನಡುವೆ ಬಾಂಗ್ಲಾ ಸಚಿವರೊಬ್ಬರು ಭಾರತದ ಪರವಾಗಿ ಧ್ವನಿಗೂಡಿಸಿದ್ದಾರೆ.

ನಮಗೆ ಭಾರತದ ಬಗ್ಗೆ ತುಂಬಾ ಹೆಮ್ಮೆ ಇದೆ. ಏಕೆಂದರೆ ಅವರು ಅಪ್ರಬುದ್ಧವೆನಿಸಿದ ನಿರ್ಧಾರಗಳನ್ನು ಎಂದಿಗೂ ತೆಗೆದುಕೊಳ್ಳುವುದಿಲ್ಲ, ಭಾರತದೊಂದಿಗೆ ನಾವು ಬಹಳ ಗಟ್ಟಿಯಾದ ಸಂಬಂಧವನ್ನು ಹೊಂದಿದ್ದೇವೆ. ಆದರೆ ಕೆನಡಾ ಹಾಗೂ ಭಾರತದ ನಡುವಿನ ಈ ಹೊಸ ಬೆಳವಣಿಗೆ ಬೇಸರದ ವಿಚಾರ ಎಂದು ಬಾಂಗ್ಲಾ ವಿದೇಶಾಂಗ ಸಚಿವ ಅಬ್ದುಲ್ ಮೊಮೆಮ್‌ ಹೇಳಿದ್ದಾರೆ.

ಭಾರತ ಹಾಗೂ ಕೆನಡಾ ನಡುವೆ ರಾಜತಾಂತ್ರಿಕ ಸಮರ ಉಂಟಾಗಿದ್ದು, ಇದರಿಂದ ಜಿ-20 ವೇಳೆ ನವದೆಹಲಿ ಒಟ್ಟವಾ ನಡುವೆ ಆದ ಒಪ್ಪಂದದ ಮೇಲೆ ಇದರ ಕರಿಛಾಯೆ ಬೀಳುತ್ತಿದೆ. ಆದರೆ ಇದೊಂದು ಬೇಸರದ ವಿಚಾರ. ಆದರೆ ಈ ಬಗ್ಗೆ ನನಗೆ ಹೆಚ್ಚಿಗೆ ಗೊತ್ತಿಲ್ಲದೇ ಇರುವುದರಿಂದ ಇದರ ಬಗ್ಗೆ ಕಾಮೆಂಟ್ ಮಾಡುವುದು ಸರಿ ಅಲ್ಲ. ಆದರೆ ಭಾರತದ ಬಗ್ಗೆ ನಮಗೆ ಹೆಮ್ಮೆ ಇದೆ.

ಭಾರತ ಎಂದಿಗೂ ಅಸಂಬದ್ಧವಾದ ನಿರ್ಧಾರ ಕೈಗೊಳ್ಳುವುದಿಲ್ಲ, ನಮ್ಮ ಹಾಗೂ ಭಾರತದ ನಡುವೆ ಬಹಳ ಉತ್ತಮವಾದ ಸಂಬಂಧವಿದೆ. ಈ ರಾಜತಾಂತ್ರಿಕ ಸಮರ ಆದಷ್ಟು ಬೇಗ ಕೊನೆಗೊಳ್ಳುವುದು ಎಂಬ ವಿಶ್ವಾಸವಿದೆ ಎಂದು ಬಾಂಗ್ಲಾ ವಿದೇಶಾಂಗ ಸಚಿವ ಅಬ್ದುಲ್ ಮೊಮೆಮ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು