ನವದೆಹಲಿ: ಜಿ.20 ಶೃಂಗಸಭೆ ಬಳಿಕ ಕೆನಡಾ ಭಾರತ ಸಂಬಂಧ ಹಳಸಿದೆ. ಜಿ. ಶೃಂಗಸಭೆಯಲ್ಲಿ ಕೆನಡಾದ ಖಲಿಸ್ತಾನಿ ಉಗ್ರಸಂಘಟನೆಗಳನ್ನು ಮಟ್ಟಹಾಕುವಂತೆ ಮೋದಿ ಸೂಚಿಸಿದ್ದರು. ಇದಕ್ಕೆ ಕೆನಡಾ ಪ್ರಧಾನಿ ಟೆಡ್ರೊ ತಲೆಯಾಡಿಸಿದ್ದರು. ಆದರೆ ಕೆನಡಾಕ್ಕೆ ಮರಳಿದ ಬಳಿಕ ಪಾಕ್ ನಂತೆಯೇ ಕೆನಡಾ ಕೂಡ ನರಿಬುದ್ದಿ ತೋರಿ ಭಾರತದ ವಿರುದ್ಧ ಕತ್ತಿಮಸೆಯತೊಡಗಿತ್ತು. ಅಲ್ಲದೆ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಸಾವಿಗೆ ಭಾರತವೇ ಹೊಣೆ ಎಂದು ಆರೋಪಿಸಿ ಕೆಲವು ಗಂಟೆಗಳ ನಂತರ ಕೆನಡಾ ಹಿರಿಯ ಭಾರತೀಯ ರಾಜತಾಂತ್ರಿಕರನ್ನು ಹೊರಹಾಕಿದೆ.
ಖಲಿಸ್ತಾನ್ ಟೈಗರ್ ಫೋರ್ಸ್ ಭಯೋತ್ಪಾದಕ ಗುಂಪಿನ ಮುಖ್ಯಸ್ಥ, ಖಲಿಸ್ತಾನ್ ಪರ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ‘ವಿದೇಶಿ ಶಕ್ತಿಗಳು’ ಕೈವಾಡವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಸೋಮವಾರ ಹೇಳಿದ್ದಾರೆ.
ಈ ನಡುವೆ ಭಾರತೀಯ ಮೂಲದ ಕೆನಡಾ ಸಿಂಗರ್ ಶುಭ್ ಕೆಲದಿನಗಳಿಂದ ಭಾರಿ ವಿವಾದ ಸೃಷ್ಟಿಸಿದ್ದಾರೆ. ಉತ್ತರ ಭಾರತದ ಹಲವು ಕಡೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡುವ ಶುಭ್ ಇತ್ತೀಚೆಗೆ ಖಲಿಸ್ತಾನಿ ಉಗ್ರರ ಬೆಂಬಲಿಸಿ ವಿವಾದಾತ್ಮ ಪೋಸ್ಟ್ ಹಾಕಿದ್ದರು.
ಭಾರತದ ಭೂಪಟ ಹಂಚಿಕೊಂಡಿದ್ದ ಸಿಂಗರ್ ಶುಭ್, ಇದರಲ್ಲಿ ಜಮ್ಮು ಮತ್ತು ಕಾಶ್ಮೀರವೇ ಇಲ್ಲದಾಗಿದೆ. ಇಷ್ಟೇ ಅಲ್ಲ ಪಂಜಾಬ್ ರಾಜ್ಯದಲ್ಲಿ ನೆತ್ತರು ಹರಿಯುತ್ತಿರುವ ರೀತಿಯ ನಕ್ಷೆಯನ್ನು ಹಂಚಿಕೊಂಡಿದ್ದಾರೆ.
ಜೊತೆಗೆ ಪಂಜಾಬ್ಗಾಗಿ ಪ್ರಾರ್ಥಿಸಿ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಖಲಿಸ್ತಾನಿ ಹೋರಾಟವನ್ನು ಬೆಂಬಲಿಸಿದ್ದರು. ಭಾರತದ ಸೌರ್ವಭೌಮತ್ವ, ಐಕ್ಯತೆಯನ್ನೇ ಪ್ರಶ್ನಿಸಿದ ಶುಭ್ ವಿರುದ್ದ ವಿರಾಟ್ ಕೊಹ್ಲಿ ಆಕ್ರೋಶ ಹೊರಹಾಕಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಕೊಹ್ಲಿ, ತನ್ನ ನೆಚ್ಚಿನ ಗಾಯಕ ಶುಭ್ ಅನ್ಫಾಲೋ ಮಾಡಿದ್ದರೆ.
ಕೊಹ್ಲಿ ಇನ್ಸ್ಟಾಗ್ರಾಂನಲ್ಲಿ ಕೆಲವೇ ಮಂದಿಯನ್ನು ಫಾಲೋ ಮಾಡುತ್ತಾರೆ. ಈ ಪೈಕಿ ಕೆನಡಾ ಸಂಗರ್ ಶುಭ್ ಕೂಡ ಒಬ್ಬರಾಗಿದ್ದರು. ಆದರೆ ಶುಭ್ ಭಾರತ ವಿರೋಧಿ ನಡೆಯಿಂದ ಕೊಹ್ಲಿ ಗರಂ ಆಗಿದ್ದಾರೆ. ಹೀಗಾಗಿ ಸಾಮಾಜಿಕ ಮಾಧ್ಯಮದಿಂದ ಅನ್ಫಾಲೋ ಮಾಡಿದ್ದಾರೆ. ಮುಂಬೈನಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಶುಭ್ ಕರೆಸಲಾಗಿತ್ತು. ಆದರೆ ಈ ಪೋಸ್ಟ್ ಬಳಿಕ ಕಾರ್ಯಕ್ರಮದಲ್ಲಿ ಶುಭ್ ಸಂಗೀತ ಕಾರ್ಯಕ್ರಮ ರದ್ದುಗೊಳಿಸಲಾಗಿದೆ.