ನವದೆಹಲಿ: ಸನಾತನ ಧರ್ಮದ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಕರೊನಾ ಹೇಳಿಕೆ ದೇಶದೆಲ್ಲೆಡೆ ಆಕ್ರೋಶ ಸೃಷ್ಟಿಸಿದೆ. ಬಿಜೆಪಿ, ಬಲಪಂಥೀಯ ಸಂಘಟನೆಗಳು ಸ್ಟಾಲಿನ್ ಮೇಲೆ ಮುಗಿಬಿದ್ದಿವೆ.
ಈ ನಡುವೆ ಉದಯನಿಧಿ ದ್ವೇಷ ಭಾಷಣ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಮಾಜಿ ಹೈಕೋರ್ಟ್ ನ್ಯಾಯಾಧೀಶರು, ಅಧಿಕಾರಿಗಳು ಮತ್ತು ಯೋಧರು ಸೇರಿದಂತೆ 262 ಗಣ್ಯ ನಾಗರಿಕರ ಗುಂಪು ಭಾರತದ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದೆ.
ಈ ಎಲ್ಲ ವಾದ ವಿವಾದಗಳ ನಡುವೆ ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರು, ಸನಾತನ ಧರ್ಮವನ್ನು ‘ಅಸ್ಪೃಶ್ಯತೆ’ಗೆ ಸಮಾನ ಎಂದು ವ್ಯಾಖ್ಯಾನಿಸಿದ್ದಾರೆ. ಈ ಬಗ್ಗೆ ಟ್ವೀಟ್ ನಲ್ಲಿ ಅವರು, ”ಸನಾತನ ಧರ್ಮ= ಅಸ್ಪೃಶ್ಯತೆ” ಎಂದು ಬರೆದು ಪೋಸ್ಟ್ ಹಂಚಿಕೊಂಡಿದ್ದಾರೆ. ಮತ್ತೊಂದು ಪೋಸ್ಟ್ನಲ್ಲಿ, ಅವರು ಸನಾತನ ಧರ್ಮದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಸನಾತನ ಧರ್ಮವು ಅಸ್ಪೃಶ್ಯತೆಯನ್ನು ನಂಬುತ್ತದೆ. ಹೀಗಿರುವಾಗ ನಾವು ಸನಾತನ ಧರ್ಮವನ್ನು ಹೇಗೆ ಒಪ್ಪಿಕೊಳ್ಳಬಹುದು ಎಂದು ಕೇಳಿದ್ದಾರೆ.
सनातन धर्म छुआछूत को मानता है.
हम इसे कैसे स्वीकार करें!?Sanatan Dharma believes in untouchability.
How can we accept Sanatan Dharma!?#SanatanaDharma— Prakash Ambedkar (@Prksh_Ambedkar) September 4, 2023