ನವದೆಹಲಿ: ಕಾಂಗ್ರೆಸ್ ನಡೆಸುತ್ತಿರುವ ಕ್ರೌಡ್ ಫಂಡಿಂಗ್ ದೇಶಕ್ಕಾಗಿ ದೇಣಿಗೆ ಅಭಿಯಾನದಲ್ಲಿ ಪಾಲ್ಗೊಂಡ ಪಕ್ಷದ ನಾಯಕ ರಾಹುಲ್ ಗಾಂಧಿ ದೇಣಿಗೆ ನೀಡಿದ್ದಾರೆ. ಇದು ಸಾಮರಸ್ಯ ಮತ್ತು ಪ್ರಗತಿಪರ ಭಾರತಕ್ಕೆ ತಮ್ಮ ಕೊಡುಗೆ ಎಂದು ಅವರು ಹೇಳಿದ್ದಾರೆ.
ನೀವೆಲ್ಲರೂ ದೇಣಿಗೆ ನೀಡುವ ಮೂಲಕ ಆಂದೋಲನದ ಭಾಗವಾಗಬೇಕು ಎಂದು ನಾನು ಮನವಿ ಮಾಡುತ್ತೇನೆ. ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ತಾವು ಕೊಡುಗೆ ನೀಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಆದರೆ ತಾವು ನೀಡಿದ ದೇಣಿಗೆ ಮೊತ್ತವನ್ನು ಹಂಚಿಕೊಂಡಿಲ್ಲ.2024ರ ಚುನಾವಣೆಗೂ ಮುನ್ನ ಸಂಪನ್ಮೂಲ ಕ್ರೋಢಿಕರಣಕ್ಕಾಗಿ ಕಾಂಗ್ರೆಸ್ ದೇಶಾದ್ಯಂತ ದೇಶಕ್ಕಾಗಿ ದೇಣಿಗೆ ಅಭಿಯಾನ ಆರಂಭಿಸಿದೆ, ಡಿ.18ರಂದು ಮಲ್ಲಿಕಾರ್ಜುನ ಖರ್ಗೆ ದೇಣಿಗೆ ನೀಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದ್ದರು.