News Karnataka Kannada
Thursday, May 09 2024
ದೆಹಲಿ

ನನ್ನ ತಂದೆ ಗೃಹಸಚಿವಾಲಯ ಕಾರ್ಯದರ್ಶಿ ಎಂದು ಹೇಳಿ ಪೊಲೀಸರಿಗೆ ಹಲ್ಲೆ

Police assaulted for claiming that my father was home secretary
Photo Credit : News Kannada

ಹೊಸದಿಲ್ಲಿ: ಟ್ರಾಫಿಕ್‌ ಸಿಗ್ನಲ್‌ ಜಂಪ್‌ ಮಾಡಿದ ಕಾರು ಚಾಲಕನ್ನು ಪ್ರಶ್ನಿಸಿದ ಹೆಡ್‌ಕಾನ್ಸ್‌ಟೇಬಲ್‌ಗೆ ಅಮಾನುಷವಾಗಿ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮರ್ಸಿಡಿಸ್ ಚಾಲಕನೊಬ್ಬನ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಾಲಕ ತನ್ನ ತಂದೆ ಕೇಂದ್ರ ಗೃಹ ಸಚಿವಾಲಯದಲ್ಲಿ (ಎಂಎಚ್‌ಎ) ಜಂಟಿ ಕಾರ್ಯದರ್ಶಿ ಎಂದು ಹೇಳಿಕೊಂಡಿದ್ದಾನೆ.

ಸಹಾಯಕ ಸಬ್ ಇನ್‌ಸ್ಪೆಕ್ಟರ್ ವೀರೇಂದ್ರ ಸಿಂಗ್, ಹೆಡ್ ಕಾನ್‌ಸ್ಟೆಬಲ್ ರಾಕೇಶ್ ಕುಮಾರ್ ಮತ್ತು ಕಾನ್‌ಸ್ಟೆಬಲ್ ಸುರೇಂದರ್ ಅವರನ್ನು ಹುಮಾಯೂನ್ ರಸ್ತೆಯಲ್ಲಿರುವ ಮಾರ್ಗ್ ಟಿ-ಪಾಯಿಂಟ್ ನಲ್ಲಿ ಕರ್ತವ್ಯದಲ್ಲಿದ್ದರು.

“ಸಂಜೆ 6.55 ರ ಸುಮಾರಿಗೆ, ಮೃಗಾಲಯದಿಂದ ಹುಮಾಯೂನ್ ರಸ್ತೆಯ ಕಡೆಗೆ ಹೋಗುವ ರಸ್ತೆಯಲ್ಲಿ ರೆಡ್‌ ಸಿಗ್ನಲ್‌ ಇತ್ತು. ಅಷ್ಟರಲ್ಲಿ, ಬಿಳಿ ಬಣ್ಣದ ಮರ್ಸಿಡಿಸ್, ಫಾರ್ಚುನರ್, ಇನ್ನೊಂದು ಎಸ್‌ಯುವಿ ವಾಹನ ನಿಯಮ ಮೀರಿ ಮುನ್ನುಗಿತ್ತು. ಎರಡೂ ವಾಹನಗಳು ತಾತ್ಕಾಲಿಕ ನಂಬರ್‌ ಪ್ಲೇಟ್‌ ಹೊಂದಿದ್ದು ವಾಹನ ನಿಲ್ಲಿಸುವಂತೆ ಪೊಲೀಸರು ಕೇಳಿಕೊಂಡರು.

ಈ ವೇಳೆ ಮರ್ಸಿಡಿಸ್‌ ಕಾರಿನ ಚಾಲಕ ಕೆಳಗಿಳಿದು ರಾಕೇಶ್‌ ಅವರನ್ನು ನಿಂದಿಸಿ, ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಅಲ್ಲದೇ ನನ್ನನ್ನು ಎದುರು ಹಾಕಿಕೊಂಡಲ್ಲಿ ನಿನ್ನ ಕೆಲಸದ ಮೇಲೆ ಪರಿಣಾಮ ಬೀರಬಹುದು ಎಂದು ರಾಕೇಶ್‌ ಅವರನ್ನು ಗದರಿಸಿರುವುದು ತಿಳಿದುಬಂದಿದೆ. ಈ ಕುರಿತು ಐಪಿಸಿ ಸೆಕ್ಷನ್ 186, 353 ಮತ್ತು 506 ಮತ್ತು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 184 ರ ಅಡಿಯಲ್ಲಿ ಗುರುವಾರ ಎಫ್‌ಐಆರ್ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು