ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನಿಯ ಚಾನ್ಸೆಲರ್ ಒಲಾಫ್ ಸ್ಕೋಲ್ಜ್ ಶನಿವಾರ ನವದೆಹಲಿಯಲ್ಲಿ ಮಾತುಕತೆ ನಡೆಸಿದರು. “ಭಾರತ ಮತ್ತು ಜರ್ಮನಿ ಬಲವಾದ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಪರಸ್ಪರರ ಹಿತಾಸಕ್ತಿಗಳ ಆಳವಾದ ತಿಳುವಳಿಕೆಯನ್ನು ಆಧರಿಸಿವೆ. ಎರಡೂ ದೇಶಗಳು ತಮ್ಮ ನಡುವಿನ ಸಾಂಸ್ಕೃತಿಕ ಮತ್ತು ಆರ್ಥಿಕ ವಿನಿಮಯದ ಸುದೀರ್ಘ ಇತಿಹಾಸ ಹೊಂದಿವೆ ಜರ್ಮನಿ ಕೂಡ ಭಾರತದಲ್ಲಿ ಹೂಡಿಕೆಯ ಪ್ರಮುಖ ಮೂಲವಾಗಿದೆ” ಎಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ಮೋದಿ ಹೇಳಿದರು.
“ಯುರೋಪ್ನಲ್ಲಿ ನಮ್ಮ ಅತಿದೊಡ್ಡ ವ್ಯಾಪಾರ ಪಾಲುದಾರರ ಹೊರತಾಗಿ, ಜರ್ಮನಿಯು ಭಾರತದಲ್ಲಿ ಹೂಡಿಕೆಯ ಪ್ರಮುಖ ಮೂಲವಾಗಿದೆ” ಎಂದು ಅವರು ಹೇಳಿದರು.
“ಮೇಕ್ ಇನ್ ಇಂಡಿಯಾ” ಮತ್ತು “ಆತ್ಮನಿರ್ಭರ್ ಭಾರತ್” ಅಭಿಯಾನದಿಂದಾಗಿ ಭಾರತದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿವೆ ಎಂದು ಮೋದಿ ಹೇಳಿದರು.
“ಈ ಅವಕಾಶಗಳಲ್ಲಿ ಜರ್ಮನಿಯು ತೋರುತ್ತಿರುವ ಆಸಕ್ತಿಯು ನಮಗೆ ಬಹಳ ಉತ್ತೇಜನಕಾರಿಯಾಗಿದೆ” ಎಂದು ಅವರು ಜರ್ಮನಿಯ ಚಾನ್ಸೆಲರ್ ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆಗಳನ್ನು ನಡೆಸಿದ ನಂತರ ಹೇಳಿದರು. ಡಿಜಿಟಲ್ ರೂಪಾಂತರ, ಫಿನ್ಟೆಕ್, ಐಟಿ, ಟೆಲಿಕಾಂ ಮತ್ತು ಪೂರೈಕೆಯ ವಿವಿಧ ಒಪ್ಪಂದಕ್ಕೆ ಎರಡೂ ದೇಶಗಳು ಸಹಿ ಹಾಕಿವೆ.