News Karnataka Kannada
Friday, May 17 2024
ದೆಹಲಿ

ನಕಲಿ ನೋಟು ಮುದ್ರಣ ಜಾಲ: ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಎನ್‌ಐಎ ದಾಳಿ

NIA conducts raids in four states, including Karnataka, on fake currency printing racket
Photo Credit : News Kannada

ನವದೆಹಲಿ: ನಕಲಿ ನೋಟುಗಳ ಜಾಲಕ್ಕೆ ಸಂಬಂಧಿಸಿ ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳ ಹಲವು ಸ್ಥಳಗಳಲ್ಲಿ ದಾಳಿ ನಡೆಸಿರುವ ಎನ್‌ಐಎ ನಕಲಿ ನೋಟುಗಳು, ಕರೆನ್ಸಿ ಮುದ್ರಣ ಕಾಗದ, ಪ್ರಿಂಟರ್ ಮತ್ತು ಡಿಜಿಟಲ್ ಗ್ಯಾಜೆಟ್‌ಗಳನ್ನು ವಶಪಡಿಸಿಕೊಂಡಿದೆ.

ಎನ್‌ಐಎ ತಂಡ ಮಹಾರಾಷ್ಟ್ರದ ಕೊಹ್ಲಾಪುರದಲ್ಲಿ ಆರೋಪಿ ರಾಹುಲ್ ತಾನಾಜಿ ಪಾಟೀಲ್ ಅಕಾ ಜಾವೇದ್, ಉತ್ತರ ಪ್ರದೇಶದ ಶಹಜಾನ್‌ಪುರ ಜಿಲ್ಲೆಯ ವಿವೇಕ್ ಠಾಕೂರ್ ಅಕಾ ಆದಿತ್ಯ ಸಿಂಗ್, ಕರ್ನಾಟಕದ ಬಳ್ಳಾರಿ ಜಿಲ್ಲೆಯ ಮಹೇಂದರ್ ಮತ್ತು ಶಿವ ಪಾಟೀಲ್ ಎಂಬಾತನ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿವೆ. ಮಹಾರಾಷ್ಟ್ರದ ಯವತ್ಮಾಲ್‌ನಲ್ಲಿರುವ ಭೀಮರಾವ್ ಮತ್ತು ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿಯೂ ಕೂಡ ದಾಳಿ ನಡೆದಿದೆ.

ಠಾಕೂರ್ ಮನೆಯಿಂದ ಕರೆನ್ಸಿ ಪ್ರಿಂಟಿಂಗ್ ಪೇಪರ್‌ಗಳ ಜೊತೆಗೆ 500, 200 ಮತ್ತು 100 ರೂಪಾಯಿ ಮುಖಬೆಲೆಯ 6,600 ರೂಪಾಯಿಗಳ ಎಫ್‌ಐಸಿಎನ್ ಅನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಟೀಲ್ ಮತ್ತು ಇತರರು ಗಡಿಯಾಚೆಯಿಂದ ನಕಲಿ ಕರೆನ್ಸಿ, ಮುದ್ರಣ ಪರಿಕರಣಗಳನ್ನು ಸಂಗ್ರಹ ಮಾಡುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು