ಬೆಂಗಳೂರು: ಬೆಂಗಳೂರು ಐಟಿ ಬಿಟಿ ಸಿಟಿ ಎಂಬ ಖ್ಯಾತಿ ಪಡೆದು ಜಗತ್ತಿನ ಕಣ್ಣು ಕುಕ್ಕುತ್ತಿದೆ. ಅದೇ ವೇಳೆ ಟ್ರಾಫಿಕ್ ಜಾಂ, ತ್ಯಾಜ್ಯವಿಲೇವಾರಿ ಸಮಸ್ಯೆಯಿಂದ ಬಳಲಿ ಬೆಂಡಾಗಿದೆ. ಇದೀಗ ಜಗತ್ತೆ ಬೆಚ್ಚಿಬೀಳುವಂತೆ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.
ನಾಗರಬಾವಿಯ ಆಶಾರಾಣಿ ಎಂಬುವರು ಕಳೆದೆರಡು ದಿನದ ಹಿಂದೆ ವಾಣಿವಿಲಾಸ್ ಆಸ್ಪತ್ರೆಗೆ ದಾಖಲಾಗಿದ್ರು. ಎರಡು ದಿನದ ಹಿಂದೆ ಅಂದ್ರೆ ಗುರುವಾರದಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಮಗುವಿನ ಸುತ್ತ ಜಿರಳೆಗಳ ಕಾಟ ಶುರುವಾಗಿತ್ತು. ಎಳೆ ಕಂದಮ್ಮಗಳ ಸುತ್ತ ಜಿರಳೆಗಳು ಓಡಾಡ್ತಿದ್ದವು. ಅಲ್ಲದೇ ಹೆರಿಗೆ ವಾರ್ಡ್ ಸೇರಿದಂತೆ ಬಾಣಂತಿ ವಾರ್ಡ್ ನಲ್ಲೂ ಜಿರಳೆಗಳು ತುಂಬಿ ಹೋಗಿದ್ದವು. ವಾಣಿ ವಿಲಾಸ ಆಸ್ಪತ್ರೆಯಲ್ಲಿ ಸಿಬ್ಬಂದಿ ನಿರ್ಲಕ್ಷ್ಯದಿಂದ ಜಿರಳೆ ಹೆಚ್ಚಾಗಿದೆ ಅಲ್ಲದೇ ಎರಡು ದಿನದ ಮಗುವಿಗೆ ದೇಹ ಪೂರ್ತಿ ಜಿರಳೆ ಕಚ್ಚಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.