News Karnataka Kannada
Thursday, May 02 2024
ದೆಹಲಿ

ಸಿಖ್ಖರ ನರಮೇಧ ಮಾಡಿದ ನರೇಂದ್ರ ಮೋದಿ- ನವದೆಹಲಿಯಲ್ಲಿ ಖಲಿಸ್ತಾನಿ ಬರಹ

Narendra Modi committed genocide of Sikhs
Photo Credit : News Kannada

ನವದೆಹಲಿ: ನವದೆಹಲಿಯ ಕಾಶ್ಮೀರಿ ಗೇಟ್ ಮೇಲ್ಸೇತುವೆಯ ಕೆಳಗಿರುವ ಗೋಡೆಗಳ ಮೇಲೆ ಖಲಿಸ್ತಾನಿ ಪರ ಬರಹ ಕಂಡುಬಂದಿವೆ. ಈ ಹಿನ್ನಲೆಯಲ್ಲಿ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಖಲಿಸ್ತಾನಿ ಪರ ಬರಹವೊಂದನ್ನು ಗೋಡೆಗಳಲ್ಲಿ ಬರೆದಿರುವ ಬಗ್ಗೆ ವಿಡಿಯೋವೊಂದು ಜಾಲತಾಣಗಳಲ್ಲಿ ಹರಿದಾಡಿದ್ದು, ಅದರಂತೆ ಶೋಧ ಆರಂಭಿಸಿದಾಗ ಸೀಲಂಪುರದಿಂದ ಕಾಶ್ಮೀರ್ ಗೇಟ್ ಕಡೆಗೆ ಬರುತ್ತಿರುವಾಗ ಯುಧಿಸ್ಟರ್ ಮೇಲ್ಸೇತುವೆಯಲ್ಲಿ ಬರಹ ಕಂಡುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿಖ್ಖರ ನರಮೇಧ ಮಾಡಿದ ನರೇಂದ್ರ ಮೋದಿ, ಅಲ್ಲದೆ ಡೆಲ್ಲಿ ಬನ್‌ಗಯಾ ಖಲಿಸ್ತಾನ್‌ ಎಂಬ ಬರಹವಿದೆ.
ಭಾರತ ದಂಡ ಸಂಹಿತೆ ಮತ್ತು ದೆಹಲಿ ಸಾರ್ವಜನಿಕ ಆಸ್ತಿ ವಿರೂಪಗೊಳಿಸುವಿಕೆ ತಡೆ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ವಿಷಯದಲ್ಲಿ ತನಿಖೆ ಪ್ರಾರಂಭಿಸಲಾಗಿದೆ” ಎಂದು ಅಧಿಕಾರಿ ಹೇಳಿದ್ದಾರೆ. ಆಗಸ್ಟ್‌ನಲ್ಲಿ ದೆಹಲಿ ಪೊಲೀಸ್ ಅಪರಾಧ ವಿಭಾಗವು ದೆಹಲಿ ಮೆಟ್ರೋ ನಿಲ್ದಾಣಗಳಲ್ಲಿ ಗೋಡೆಗಳಲ್ಲಿ ಖಲಿಸ್ತಾನಿ ಪರ ಬರಹ ಬರೆದ ಪಂಜಾಬ್‌ನ ಇಬ್ಬರನ್ನು ಬಂಧಿಸಿತ್ತು.

ಇಬ್ಬರು ಆರೋಪಿಗಳು ನಿಷೇಧಿತ ಭಯೋತ್ಪಾದಕ ಸಂಘಟನೆ ಎಸ್‌ಎಫ್‌ಜೆಯೊಂದಿಗೆ ಸಂಬಂಧ ಹೊಂದಿದ್ದು, ಪ್ರಿತ್ಪಾಲ್ ಸಿಂಗ್ ಎ.ಕೆ ಕಾಕಾ (30) ಮತ್ತು ಆತನ ಸಹಚರ ರಾಜ್ವಿಂದರ್ ಅಲಿಯಾಸ್ ಕಾಳೆ ಎಂದು ಗುರುತಿಸಲಾಗಿತ್ತು. ಬರಹ ಬರೆಯಲು ಎಸ್‌ಎಫ್‌ಜೆ ಹ್ಯಾಂಡ್ಲರ್ ಗುರ್ಪತ್‌ವಂತ್ ಸಿಂಗ್ ಪನ್ನುನ್ 7,000 ಅಮೆರಿಕನ್‌ ಡಾಲರ್‌ ನೀಡುವುದಾಗಿ ಭರವಸೆ ನೀಡಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು