ನವದೆಹಲಿ: ಕರ್ಣಾಟಕ ಬ್ಯಾಂಕಿನ ನವದೆಹಲಿ-ಕಾರ್ಪೊರೇಟ್ ಫೈನಾನ್ಸ್ ಶಾಖೆಯ ಸ್ಥಳಾಂತರಗೊಂಡ ಹೊಸ ಕಟ್ಟಡವನ್ನು ಪದ್ಮವಿಭೂಷಣ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಸಂಸದರು (ರಾಜ್ಯಸಭೆ) ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು.
ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್., ಡಾ| ಡಿ. ವೀರೇಂದ್ರ ಹೆಗ್ಗಡೆಯವರ ವಿಶೇಷ ಅಧಿಕಾರಿ ಕೆ.ಎನ್. ಜನಾರ್ದನ, ಬ್ಯಾಂಕಿನ ದೆಹಲಿ ಪ್ರಾದೇಶಿಕ ಕಚೇರಿಯ ಡೆಪ್ಯೂಟಿ ಜನರಲ್ ಮ್ಯಾನೇಜರ್ ಜಗದೀಶ ಕೆ.ಎಸ್. ನವದೆಹಲಿ-ಕಾರ್ಪೊರೇಟ್ ಫೈನಾನ್ಸ್ ಶಾಖೆಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಚಂದ್ರಶೇಖರ ಜಿ., ದೆಹಲಿ ಪ್ರಾದೇಶಿಕ ಕಚೇರಿಯ ಚೀಫ್ ಮ್ಯಾನೇಜರ್ ಪ್ರಜ್ವಲ್ ಗುಂಜಾಲ್ ಹಾಗೂ ಬ್ಯಾಂಕಿನ ಗ್ರಾಹಕರು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು.