ಆಗ್ರಾ: ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಮೂಲಕ ಹಾದುಹೋಗುವ ಯಮುನಾ ಎಕ್ಸ್ ಪ್ರೆಸ್ ವೇಯ ಖಂಡೋಲಿ ಟೋಲ್ ಪ್ಲಾಜಾ ಬಳಿ ಮುಂಜಾನೆ 4 ಗಂಟೆ ಸುಮಾರಿಗೆ ಡಬಲ್ ಡೆಕ್ಕರ್ ಬಸ್ ಕಬ್ಬಿಣದ ಸರಳುಗಳನ್ನು ಸಾಗಿಸುತ್ತಿದ್ದ ಟ್ರೈಲರ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು, 10 ಜನರು ಗಾಯಗೊಂಡಿದ್ದಾರೆ.
ಪೊಲೀಸರ ಪ್ರಕಾರ, ಬಸ್ ಚಾಲಕ ಎಕ್ಸ್ ಪ್ರೆಸ್ ವೇಯ ಬದಿಯಲ್ಲಿ ನಿಲ್ಲಿಸಿದ್ದ ಟ್ರೈಲರ್ ನ ಹಿಂಭಾಗದಿಂದ ಡಿಕ್ಕಿ ಹೊಡೆದಿದೆ.
ಮೃತಪಟ್ಟವರನ್ನು ಗ್ವಾಲಿಯರ್ ಮೂಲದ ಟ್ರಾವೆಲ್ ಕಂಪನಿಗೆ ಸೇರಿದ ಖಾಸಗಿ ಡಬಲ್ ಡೆಕ್ಕರ್ ಬಸ್ಸಿನ ಚಾಲಕರು ಎಂದು ಗುರುತಿಸಲಾಗಿದೆ. ಬಸ್ ದೆಹಲಿಯಿಂದ ಗ್ವಾಲಿಯರ್ ಗೆ ಹೋಗುತ್ತಿತ್ತು.
“ಅಪಘಾತ ಸಂಭವಿಸಿದಾಗ ಅವರಲ್ಲಿ ಒಬ್ಬರು ಚಾಲನೆ ಮಾಡುತ್ತಿದ್ದರೆ, ಇನ್ನೊಬ್ಬರು ನಿದ್ರೆ ಮಾಡುತ್ತಿದ್ದರು. ಬಸ್ಸಿನಲ್ಲಿ ಒಟ್ಟು ೪೦ ಪ್ರಯಾಣಿಕರಿದ್ದರು. ಅವರಲ್ಲಿ 10 ಮಂದಿ ಗಾಯಗೊಂಡಿದ್ದು, ನಾಲ್ವರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಎಸ್.ಎನ್.ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ ಎಂದು ಖಂಡೋಲಿ ಪೊಲೀಸ್ ಠಾಣಾಧಿಕಾರಿ ರಮಿತ್ ಕುಮಾರ್ ತಿಳಿಸಿದ್ದಾರೆ.