ನವದೆಹಲಿ: ನಾವು ಯುದ್ಧಕ್ಕೆ ಯಾವಾಗಲೂ ಸನ್ನದ್ಧರಾಗಿದ್ದೇವೆ ಎಂದು ಭಾರತದ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಹೇಳಿದ್ದಾರೆ.
ನಾವು ಈವರೆಗೆ ಯಾವುದೇ ದೇಶದ ಮೇಲೆ ಆಕ್ರಮಣ ಮಾಡಿ ಒಂದಿಚು ಭೂಮಿಯನ್ನೂ ವಶಪಡಿಸಿಕೊಂಡಿಲ್ಲ ಎಂದ ಅವರು, ಗಡಿಯಲ್ಲಿ ಉದ್ಭವಿಸುವ ಯಾವುದೇ ಸವಾಲಿಗೂ ಭಾರತ ಸದಾ ಸಿದ್ಧವಿದೆ. ನೆಲ, ವಾಯು, ಗಾಳಿಯ ಮೂಲಕ ಯಾರಾದರೂ ನಮ್ಮ ಮೇಲೆ ದಾಳಿ ಮಾಡಲು ಪ್ರಯತ್ನಿಸಿದರೆ ಭಾರತೀಯ ಸೇನೆ ಅವರಿಗೆ ತಕ್ಕ ಉತ್ತರ ನೀಡುತ್ತದೆ ಎಂದರು.
ರಕ್ಷಣಾ ಸಚಿವರ ಹೇಳಿಕೆಯಲ್ಲಿ ಪರೋಕ್ಷವಾಗಿ ಚೀನಾ, ಪಾಕಿಸ್ತಾನ ಮತ್ತು ಈಶಾನ್ಯ ಪ್ರದೇಶಗಳ ಗಡಿಯಲ್ಲಿ ಮುಂದುವರೆದ ಉದ್ವಿಘ್ನತೆಯನ್ನು ಉಲ್ಲೇಖಿಸಲಾಗಿದೆ.
ಭಾರತ-ಚೀನಾ ಸಂಬಂಧ ಸರಿ ಇಲ್ಲವೆಂದು ಹೇಳಿದ ರಾಜನಾಥ್ ಸಿಂಗ್, ಭಾರತವು ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತದೆ ಎಂದರು.