News Karnataka Kannada
Friday, May 03 2024
ದೆಹಲಿ

‘ದೇಶ & ಕುಟುಂಬದ ನಡುವೆ ಆಯ್ಕೆ ಬಂದ್ರೆ ನಾನು ದೇಶವನ್ನೇ ಆಯ್ಕೆ ಮಾಡ್ತೇನೆ’

"ದೇಶ & ಕುಟುಂಬದ ನಡುವೆ ಆಯ್ಕೆ ಬಂದ್ರೆ ನಾನು ಮೊದಲು ದೇಶವನ್ನೇ ಆಯ್ಕೆ ಮಾಡುತ್ತೇನೆ" ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು.
Photo Credit : News Kannada

ನವದೆಹಲಿ: “ದೇಶ & ಕುಟುಂಬದ ನಡುವೆ ಆಯ್ಕೆ ಬಂದ್ರೆ ನಾನು ಮೊದಲು ದೇಶವನ್ನೇ ಆಯ್ಕೆ ಮಾಡುತ್ತೇನೆ” ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು.

2047ರ ವೇಳೆಗೆ ದೇಶವನ್ನ ಅಭಿವೃದ್ಧಿ ಹೊಂದಿದ ಭಾರತವನ್ನಾಗಿ ಮಾಡಲು ನಾವು ನಮ್ಮ ಸಂಸ್ಥೆಗಳನ್ನ ಉದ್ಯಮದೊಂದಿಗೆ ಸಂಪರ್ಕಿಸಬೇಕು ಎಂದು ಯೋಗಿ ಹೇಳಿದರು.

ಮುಂದಿನ 25 ವರ್ಷಗಳ ನಮ್ಮ ಗುರಿಗಳನ್ನ ನಾವು ನಿರ್ಧರಿಸಬೇಕು. ದೇಶದ 142 ಕೋಟಿ ಜನಸಂಖ್ಯೆಯು ಒಂದೇ ಧ್ವನಿಯಲ್ಲಿ ಎದ್ದುನಿಂತು ಮುಂದುವರಿಯಲು ಸಂಕಲ್ಪ ಮಾಡಿದಾಗ, ನಮ್ಮ ದೇಶವು ಅಭಿವೃದ್ಧಿ ಹೊಂದಿದ ಭಾರತವಾಗದಿರಲು ಯಾವುದೇ ಕಾರಣವಿಲ್ಲ ಎಂದರು.

ಇಂದು ಗ್ರೇಟರ್ ನೋಯ್ಡಾದಲ್ಲಿರುವ ಬೆನೆಟ್ ವಿಶ್ವವಿದ್ಯಾನಿಲಯದ 5 ನೇ ಘಟಿಕೋತ್ಸವದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಿ ಮಾತನಾಡಿದರು. ಇನ್ನು ಇದಕ್ಕೂ ಮುನ್ನ ಮುಖ್ಯಮಂತ್ರಿಗಳು ವಿಶ್ವವಿದ್ಯಾಲಯದ ಆವರಣದಲ್ಲಿ ಸಸಿಗಳನ್ನು ನೆಟ್ಟರು.

ನಾವು ಸಾಮಾನ್ಯ ಜೀವನದಲ್ಲಿ ಧರ್ಮ ಎಂದು ಕರೆಯುವುದು ನಿಜವಾಗಿ ಧರ್ಮವಲ್ಲ, ಅದು ಅದರ ಒಂದು ಭಾಗವಾಗಿರಬಹುದು ಎಂದು ಸಿಎಂ ಯೋಗಿ ಹೇಳಿದ್ದಾರೆ. ಆರಾಧನೆಯ ವಿಧಾನವನ್ನ ಧರ್ಮವೆಂದು ಪರಿಗಣಿಸಲಾಗುವುದಿಲ್ಲ. ಇದು ವೈಯಕ್ತಿಕ ಕೆಲಸ. ಧರ್ಮವು ವಿಶಾಲವಾದ ಪರಿಕಲ್ಪನೆಯಾಗಿದೆ, ಇದು ಕರ್ತವ್ಯಗಳು ಮತ್ತು ನೈತಿಕ ಮೌಲ್ಯಗಳೊಂದಿಗೆ ಸದ್ಗುಣದ ಮಾರ್ಗವನ್ನ ಅನುಸರಿಸಲು ನಮ್ಮನ್ನು ಪ್ರೇರೇಪಿಸುತ್ತದೆ.

ಇದು ಪ್ರತಿಯೊಬ್ಬ ಭಾರತೀಯನ ಸಂಕಲ್ಪವಾಗಬೇಕು, ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರಲಿ. ನಾವೆಲ್ಲರೂ ದೇಶದ ಮೊದಲ ದೃಷ್ಟಿಯನ್ನು ಹೊಂದಿದಾಗ ಮಾತ್ರ ಇದು ಸಾಧ್ಯವಾಗುತ್ತದೆ. ನಮ್ಮ ಪ್ರತಿಯೊಂದು ಕೆಲಸವೂ ದೇಶದ ಹೆಸರಲ್ಲಿರಬೇಕು. ದೇಶದ ನಂತರ ನನ್ನ ವೈಯಕ್ತಿಕ, ನನ್ನ ಕುಟುಂಬದ ಭಾವನೆಗಳನ್ನು ಉಳಿಸಿಕೊಳ್ಳಬೇಕು ಎಂದು ಒತ್ತಿ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು