News Karnataka Kannada
Monday, May 06 2024
ದೆಹಲಿ

ನಾನಿಲ್ಲಿ ಸೇಫ್‌ ಆಗಿದ್ದೇನೆ, ಅಮರನಾಥ ಯಾತ್ರಿಕನ ವಿಡಿಯೋ

I am safe here, video of Amarnath pilgrim
Photo Credit : News Kannada

ನವದೆಹಲಿ: ಜಮ್ಮುಕಾಶ್ಮೀರದಲ್ಲಿ ಮಳೆಯ ಕಾರಣ ಅಲ್ಲಲ್ಲಿ ಭೂಕುಸಿತಗಳು ಕಾಣುತ್ತಿದ್ದು, ಅಮರನಾಥ ಯಾತ್ರೆಗೆ ತೆರಳಿದ್ದ ದ.ಕ.ಜಿಲ್ಲೆಯ 20 ಮಂದಿ ಸೇಫ್ ಎಂದು ತಿಳಿದು ಬಂದ ಬೆನ್ನಲ್ಲೇ ಇದೀಗ ವ್ಯಕ್ತಿಯೋರ್ವರು ವಿಡಿಯೋ ಕಳುಹಿಸಿ ನಾನು ಸೇಫ್ ಎಂದು ತಿಳಿಸಿದ್ದಾರೆ.

ಬಂಟ್ವಾಳ ತಾಲೂಕಿನ ಬೋಳಂತೂರು ನಿವಾಸಿ ಅಭಿಲಾಷ್ ಎಂಬವರು ವಿಡಿಯೋ ಒಂದನ್ನು ಕಳುಹಿಸಿದ್ದಾರೆ. ನಾನು ಓಬ್ಬನೇ ಯಾತ್ರೆ ಮಾಡಿದ್ದು, ಯಾವುದೇ ಸಮಸ್ಯೆ ಆಗಿಲ್ಲ ಎಂದು ವಿಡಿಯೋ ಸಂದೇಶ ಕಳುಹಿಸಿದ್ದಾರೆ. ಪುರಾಣಿ ಮಂಡಿ ಆಶ್ರಮದಲ್ಲಿ ಸೇಫ್ ಆಗಿದ್ದೇನೆ ಎಂದು ವಿಡಿಯೋ ಮಾಡಿ ಕಳುಹಿಸಿದ್ದಾರೆ. ಅವರು ತಂಗಿರುವ ಆಶ್ರಮದಿಂದ 280 ಕಿಮೀ ಇದ್ದು, ಮಿಲಿಟರಿಯವರು ಹೋಗಲು ಅನುವು ಮಾಡಿದ ಕೂಡಲೇ ಅಮರನಾಥ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು ವಾಪಸು ಬರುತ್ತೇವೆ ಎಂದು ತಿಳಿಸಿದ್ದಾರೆ.

ತಂಗಿರುವ ಕ್ಯಾಂಪ್ ನಲ್ಲಿ ಊಟ ವಸತಿ ಸಹಿತ ಎಲ್ಲವನ್ನು ಉಚಿತವಾಗಿ ನೀಡುತ್ತಿದ್ದಾರೆ, ಯಾವುದೇ ಸಮಸ್ಯೆ ಇಲ್ಲ. ನನ್ನ ಜೊತೆ ಬೇರೆ ಬೇರೆ ಕಡೆಗಳಿಂದ ಬಂದಿರುವ ಅನೇಕ ಯಾತ್ರಾರ್ಥಿಗಳು ಸೇಫ್ ಅಗಿ ಇದ್ದಾರೆ ಎಂದು ಅವರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು