ನವದೆಹಲಿ: ಜನಸಂಖ್ಯೆಯ ಶೇಕಡಾ 50ರಷ್ಟಿರುವ ಮಹಿಳೆಯರು ಭಾರತದ ಬೆಳವಣಿಗೆಗೆ ಪ್ರಮುಖ ಕೊಡುಗೆದಾರರಾಗಿದ್ದು, ಅವರನ್ನು ನಿರ್ಬಂಧಿಸುವ ಬದಲು ಹುಡುಗರಿಗೆ ಕಲಿಸುವ ಸಮಯ ಬಂದರೂ, ಪುರುಷರಿಗೆ ಥಳಿಸುವುದು ಲಿಂಗ ಸಮಾನತೆ ಎಂದು ಕರೆಸಿಕೊಳ್ಳುವುದಿಲ್ಲ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ‘ವಾಟ್ ಇಂಡಿಯಾ ಥಿಂಕ್ಸ್ ಟುಡೇʼ ಗ್ಲೋಬಲ್ ಶೃಂಗಸಭೆಯ 2024ರ ಆವೃತ್ತಿಯಲ್ಲಿ ಹೇಳಿದ್ದಾರೆ.
ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕಾದರೆ ಲಿಂಗ ಸಮಾನತೆ ಅತಿ ಮುಖ್ಯ. ಸಮಾನತೆಯ ಘೋಷವಾಕ್ಯವಾಗಿ ಮಹಿಳಾ ಸಬಲೀಕರಣದಿಂದ ಪ್ರಗತಿಯ ಸಂಕೇತವಾಗಿ ಮಹಿಳಾ ಸಾಧನೆಗೆ ನಿರೂಪಣೆ ಬದಲಾಗಬೇಕು ಎಂದು ಹೇಳಿದ ಅವರು, ಲಿಂಗ ಸಮಾನತೆಯ ಹೆಸರಿನಲ್ಲಿ ಪುರುಷರನ್ನು ಹೊಡೆಯುವುದು ಸೂಕ್ತವೆಂದು ನಾನು ಭಾವಿಸುವುದಿಲ್ಲ ಎಂದರು.
ಅಮೆರಿಕದಲ್ಲಿರುವ ಗಾಜಿನ ಚಾವಣಿಯ ಕಲ್ಪನೆ ಭಾರತದಲ್ಲಿಲ್ಲ. ಭಾರತವು ಈಗಾಗಲೇ ಮಹಿಳೆಯರು ಮತ್ತು ಸಮಾಜದಲ್ಲಿ ಅವರ ನಿಲುವಿಗೆ ಸಂಬಂಧಿಸಿದಂತೆ ಮೈಲುಗಲ್ಲುಗಳನ್ನು ದಾಟಿತ್ತು ಎಂದು ಅವರು ಅಭಿಪ್ರಯಪಟ್ಟಿದ್ದಾರೆ.
ಅಧಿಕಾರಿಯಿಂದ ಮಹಿಳೆ ಕಿರುಕುಳಕ್ಕೊಳಗಾದರೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಾವಿರಾರು ವರ್ಷಗಳ ಹಿಂದೆ ಬರೆಯಲಾದ ‘ಅರ್ಥಶಾಸ್ತ್ರ’ದಲ್ಲಿ ದಾಖಲಿತವಾಗಿರುವ ಬಗ್ಗೆಯೂ ಮತನಾಡಿದ ಇರಾನಿ, ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಲಕ್ಷ್ಮೀಬಾಯಿಯನ್ನು ನಾರಿಶಕ್ತಿಯ ಸ್ವರೂಪವಾಗಿ ನೆನಪಿಸಿದರು.