News Karnataka Kannada
Monday, May 13 2024
ದೆಹಲಿ

ಲಿಂಗ ಸಮಾನತೆಯೆಂದರೆ ಕ್ರೌರ್ಯದಲ್ಲಿ ಸಮಾನರಾಗುವುದಲ್ಲ: ಸ್ಮೃತಿ ಇರಾನಿ

ಜನಸಂಖ್ಯೆಯ ಶೇಕಡಾ 50ರಷ್ಟಿರುವ ಮಹಿಳೆಯರು ಭಾರತದ ಬೆಳವಣಿಗೆಗೆ ಪ್ರಮುಖ ಕೊಡುಗೆದಾರರಾಗಿದ್ದು, ಅವರನ್ನು ನಿರ್ಬಂಧಿಸುವ ಬದಲು ಹುಡುಗರಿಗೆ ಕಲಿಸುವ ಸಮಯ ಬಂದರೂ, ಪುರುಷರಿಗೆ ಥಳಿಸುವುದು ಲಿಂಗ ಸಮಾನತೆ ಎಂದು ಕರೆಸಿಕೊಳ್ಳುವುದಿಲ್ಲ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ‘ವಾಟ್ ಇಂಡಿಯಾ ಥಿಂಕ್ಸ್ ಟುಡೇʼ ಗ್ಲೋಬಲ್ ಶೃಂಗಸಭೆಯ 2024ರ ಆವೃತ್ತಿಯಲ್ಲಿ ಹೇಳಿದ್ದಾರೆ.
Photo Credit : News Kannada

ನವದೆಹಲಿ: ಜನಸಂಖ್ಯೆಯ ಶೇಕಡಾ 50ರಷ್ಟಿರುವ ಮಹಿಳೆಯರು ಭಾರತದ ಬೆಳವಣಿಗೆಗೆ ಪ್ರಮುಖ ಕೊಡುಗೆದಾರರಾಗಿದ್ದು, ಅವರನ್ನು ನಿರ್ಬಂಧಿಸುವ ಬದಲು ಹುಡುಗರಿಗೆ ಕಲಿಸುವ ಸಮಯ ಬಂದರೂ, ಪುರುಷರಿಗೆ ಥಳಿಸುವುದು ಲಿಂಗ ಸಮಾನತೆ ಎಂದು ಕರೆಸಿಕೊಳ್ಳುವುದಿಲ್ಲ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ‘ವಾಟ್ ಇಂಡಿಯಾ ಥಿಂಕ್ಸ್ ಟುಡೇʼ ಗ್ಲೋಬಲ್ ಶೃಂಗಸಭೆಯ 2024ರ ಆವೃತ್ತಿಯಲ್ಲಿ ಹೇಳಿದ್ದಾರೆ.

ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕಾದರೆ ಲಿಂಗ ಸಮಾನತೆ ಅತಿ ಮುಖ್ಯ. ಸಮಾನತೆಯ ಘೋಷವಾಕ್ಯವಾಗಿ ಮಹಿಳಾ ಸಬಲೀಕರಣದಿಂದ ಪ್ರಗತಿಯ ಸಂಕೇತವಾಗಿ ಮಹಿಳಾ ಸಾಧನೆಗೆ ನಿರೂಪಣೆ ಬದಲಾಗಬೇಕು ಎಂದು ಹೇಳಿದ ಅವರು, ಲಿಂಗ ಸಮಾನತೆಯ ಹೆಸರಿನಲ್ಲಿ ಪುರುಷರನ್ನು ಹೊಡೆಯುವುದು ಸೂಕ್ತವೆಂದು ನಾನು ಭಾವಿಸುವುದಿಲ್ಲ ಎಂದರು.

ಅಮೆರಿಕದಲ್ಲಿರುವ ಗಾಜಿನ ಚಾವಣಿಯ ಕಲ್ಪನೆ ಭಾರತದಲ್ಲಿಲ್ಲ. ಭಾರತವು ಈಗಾಗಲೇ ಮಹಿಳೆಯರು ಮತ್ತು ಸಮಾಜದಲ್ಲಿ ಅವರ ನಿಲುವಿಗೆ ಸಂಬಂಧಿಸಿದಂತೆ ಮೈಲುಗಲ್ಲುಗಳನ್ನು ದಾಟಿತ್ತು ಎಂದು ಅವರು ಅಭಿಪ್ರಯಪಟ್ಟಿದ್ದಾರೆ.

ಅಧಿಕಾರಿಯಿಂದ ಮಹಿಳೆ ಕಿರುಕುಳಕ್ಕೊಳಗಾದರೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಾವಿರಾರು ವರ್ಷಗಳ ಹಿಂದೆ ಬರೆಯಲಾದ ‘ಅರ್ಥಶಾಸ್ತ್ರ’ದಲ್ಲಿ ದಾಖಲಿತವಾಗಿರುವ ಬಗ್ಗೆಯೂ ಮತನಾಡಿದ ಇರಾನಿ, ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಲಕ್ಷ್ಮೀಬಾಯಿಯನ್ನು ನಾರಿಶಕ್ತಿಯ ಸ್ವರೂಪವಾಗಿ ನೆನಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು