ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ(CAA) ಯನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸೋಮವಾರ ಜಾರಿಗೆ ತಂದಿದೆ. ನೀತಿ ಸಂಹಿತೆ ಜಾರಿಯಾಗುವ ಮೊದಲೇ ಈ ಹೆಜ್ಜೆ ಇಡಲಾಗಿದೆ.
ಇದರ ಅನ್ವಯ ೨೦೧೪ರ ಡಿ.೩೧ಕ್ಕೂ ಮೊದಲು ಭಾರತಕ್ಕೆ ಬಂದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಹಿಂದು, ಸಿಖ್, ಜೈನ್, ಕ್ರಿಸ್ಟಿಯನ್, ಬೌದ್ಧ ಮತ್ತು ಪಾರ್ಸಿ ಸಮುದಾಯಗಳ ಜನರು ಭಾರತದ ಪೌರರಾಗಲು ಅರ್ಹತೆ ಪಡೆಯುತ್ತಾರೆ.
ಸಿಎಎ ಜಾರಿ ೨೦೧೯ರ ಲೋಕಸಭಾ ಚುನಾವಣೆಯ ಬಿಜೆಪಿಯ ಪ್ರಣಾಲಿಕೆಯ ಬಹುಮುಖ್ಯ ಅಂಶವಾಗಿತ್ತು.