ನವದೆಹಲಿ: ಮದ್ರಸಾವೊಂದರಲ್ಲಿ ಹತ್ತು ವರ್ಷದ ಬಾಲಕನನ್ನು ಸರಪಳಿಯಿಂದ ಬಂಧಿಸಿ ಅಮಾನುಷವಾಗಿ ಥಳಿಸಿದ ಘಟನೆ ಉತ್ತರ ಪ್ರದೇಶದ ಶಹನಾಪುರ್ ವ್ಯಾಪ್ತಿಯಲ್ಲಿ ನಡೆದಿದೆ. ಅಲ್ಲದೆ ಆತನಿಗೆ ಥಳಿತದ ಶಿಕ್ಷೆಯೊಂದಿಗೆ 2 ದಿನಗಳ ಕಾಲ ಅನ್ನ ಆಹಾರವನ್ನು ನೀಡದೆ ಚಿತ್ರಹಿಂಸೆ ನೀಡಲಾಗಿದೆ. 2 ದಿನಗಳ ನಂತರ ಬಾಲಕ ಅಲ್ಲಿಂದ ತಪ್ಪಿಸಿಕೊಂಡು ಮೊಹ್ಮಮ್ಮದ್ ಪುರ್ ಗುರ್ಜರ್ ಹಳ್ಳಿಯ ರಾಮ್ಕುಮಾರ್ ಎಂಬುವರ ಮನೆಗೆ ತಲುಪಿದ್ದಾನೆ. ಬಳಿಕ ಆ ಹಳ್ಳಿಯವರಿಗೆ ಚಿತ್ರಹಿಂಸೆ ಬಗ್ಗೆ ವಿಷಯ ತಿಳಿದು ಬಾಲಕನ ತಂದೆ ತಾಯಿಗೆ ವಿಷಯ ತಿಳಿಸಿದ್ದಾರೆ.
ಅಲ್ಲದೆ ಪೊಲೀಸ್ ಠಾಣೆಯಲ್ಲಿಯೂ ಈ ಕುರಿತು ದೂರು ದಾಖಲಿಸಿದ್ದು, ಮದ್ರಸಾ ಮುಖ್ಯಸ್ಥನ ವಿಕೃತ ಶಿಕ್ಷೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಸಂತ್ರಸ್ತ ಬಾಲಕನ ತಂದೆ ಬಿಹಾರದಲ್ಲಿ ಮೀನುಗಾರನಾಗಿ ಕೆಲಸ ಮಾಡುತ್ತಿದ್ದರು. ಸಾಂಪ್ರದಾಯಿಕ ಶಿಕ್ಷಣಕ್ಕಾಗಿ ಆತನನ್ನು ಮದ್ರಸಾಕ್ಕೆ ಸೇರ್ಪಡೆ ಮಾಡಿದ್ದರು. ಅಲ್ಲಿ ಆತನಿಗೆ ಆಹಾರ ಸೇರಿದಂತೆ ಯಾವುದೇ ಮೂಲ ಸೌಕರ್ಯಗಳನ್ನು ಒದಗಿಸುತ್ತಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ನಡುವೆ ಬಾಲಕನಿಗೆ ಶಿಕ್ಷೆ ನೀಡಿರುವ ಕುರಿತು ಮದ್ರಸಾದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ್ದು ಆತನ ಕೆಟ್ಟವರೊಂದಿಗೆ ಸಂಗ ಮಾಡುತ್ತಿದ್ದ, ಅದೇ ರೀತಿ ಬಾಲಕನಲ್ಲಿ ಉತ್ತಮನಾಗಲಿ ಎಂಬ ಕಾರಣದಿಂದ ಈ ಶಿಕ್ಷೆ ನೀಡಿದ್ದೇವೆ ಎಂದು ಆಡಳಿತ ಹೇಳಿದೆ.
#सहारनपुर*
सहारनपुर के मदरसे में बच्चे के साथ बर्बरता
मदरसे में जंजीर से बांध कर रखा गया मासूम
बच्चे का वीडियो सोशल मीडिया पर वायरल
गंगोह थाना क्षेत्र के बालू गांव का मामला@SaharanpurDm @saharanpurpol @Uppolice @aauplko @UPGovt @CMOfficeUP pic.twitter.com/CtcKq44JYk— INA NEWS (Initiate News) (@ina24news) November 14, 2023