News Karnataka Kannada
Friday, May 10 2024
ದೆಹಲಿ

ಮದ್ರಸಾದಲ್ಲಿ ಬಾಲಕನನ್ನು ಸರಪಳಿಯಿಂದ ಕಟ್ಟಿ ಹಾಕಿ ಘನಘೋರ ಶಿಕ್ಷೆ

Mdrs
Photo Credit : News Kannada

ನವದೆಹಲಿ: ಮದ್ರಸಾವೊಂದರಲ್ಲಿ ಹತ್ತು ವರ್ಷದ ಬಾಲಕನನ್ನು ಸರಪಳಿಯಿಂದ ಬಂಧಿಸಿ ಅಮಾನುಷವಾಗಿ ಥಳಿಸಿದ ಘಟನೆ ಉತ್ತರ ಪ್ರದೇಶದ ಶಹನಾಪುರ್‌ ವ್ಯಾಪ್ತಿಯಲ್ಲಿ ನಡೆದಿದೆ. ಅಲ್ಲದೆ ಆತನಿಗೆ ಥಳಿತದ ಶಿಕ್ಷೆಯೊಂದಿಗೆ 2 ದಿನಗಳ ಕಾಲ ಅನ್ನ ಆಹಾರವನ್ನು ನೀಡದೆ ಚಿತ್ರಹಿಂಸೆ ನೀಡಲಾಗಿದೆ. 2 ದಿನಗಳ ನಂತರ ಬಾಲಕ ಅಲ್ಲಿಂದ ತಪ್ಪಿಸಿಕೊಂಡು ಮೊಹ್ಮಮ್ಮದ್‌ ಪುರ್‌ ಗುರ್ಜರ್‌ ಹಳ್ಳಿಯ ರಾಮ್‌ಕುಮಾರ್‌ ಎಂಬುವರ ಮನೆಗೆ ತಲುಪಿದ್ದಾನೆ. ಬಳಿಕ ಆ ಹಳ್ಳಿಯವರಿಗೆ ಚಿತ್ರಹಿಂಸೆ ಬಗ್ಗೆ ವಿಷಯ ತಿಳಿದು ಬಾಲಕನ ತಂದೆ ತಾಯಿಗೆ ವಿಷಯ ತಿಳಿಸಿದ್ದಾರೆ.

ಅಲ್ಲದೆ ಪೊಲೀಸ್‌ ಠಾಣೆಯಲ್ಲಿಯೂ ಈ ಕುರಿತು ದೂರು ದಾಖಲಿಸಿದ್ದು, ಮದ್ರಸಾ ಮುಖ್ಯಸ್ಥನ ವಿಕೃತ ಶಿಕ್ಷೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಸಂತ್ರಸ್ತ ಬಾಲಕನ ತಂದೆ ಬಿಹಾರದಲ್ಲಿ ಮೀನುಗಾರನಾಗಿ ಕೆಲಸ ಮಾಡುತ್ತಿದ್ದರು. ಸಾಂಪ್ರದಾಯಿಕ ಶಿಕ್ಷಣಕ್ಕಾಗಿ ಆತನನ್ನು ಮದ್ರಸಾಕ್ಕೆ ಸೇರ್ಪಡೆ ಮಾಡಿದ್ದರು. ಅಲ್ಲಿ ಆತನಿಗೆ ಆಹಾರ ಸೇರಿದಂತೆ ಯಾವುದೇ ಮೂಲ ಸೌಕರ್ಯಗಳನ್ನು ಒದಗಿಸುತ್ತಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ನಡುವೆ ಬಾಲಕನಿಗೆ ಶಿಕ್ಷೆ ನೀಡಿರುವ ಕುರಿತು ಮದ್ರಸಾದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ್ದು ಆತನ ಕೆಟ್ಟವರೊಂದಿಗೆ ಸಂಗ ಮಾಡುತ್ತಿದ್ದ, ಅದೇ ರೀತಿ ಬಾಲಕನಲ್ಲಿ ಉತ್ತಮನಾಗಲಿ ಎಂಬ ಕಾರಣದಿಂದ ಈ ಶಿಕ್ಷೆ ನೀಡಿದ್ದೇವೆ ಎಂದು ಆಡಳಿತ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು