News Karnataka Kannada
Friday, May 03 2024
ದೆಹಲಿ

ಟಿವಿ ನೇರಪ್ರಸಾರದ ವರದಿ ವೇಳೆ ಅವಾಚ್ಯ ಶಬ್ದ ಬಳಕೆ : ವಿಡಿಯೋ ವೈರಲ್‌

ಪತ್ರಿಕಾಮಾಧ್ಯಮ ಕ್ಷೇತ್ರದಲ್ಲಿ ವರದಿಗಾರಿಕೆ ಒಂದು ಕಷ್ಟಕರವಾದದ್ದು, ಟಿವಿ ಟಿವಿ ಸುದ್ದಿ ವರದಿಗಾರರು ಕೂಡ ತಮ್ಮ ವರದಿಯಲ್ಲಿ ವಿಷೇಶ ಗಮನ ವಹಿಸಬೇಕಾಗುತ್ತದೆ. ನೇರ ಪ್ರಸಾರದ ಸಮಯದಲ್ಲಿ ವರದಿಗಾರ ತನ್ನ ಪದಗಳ ಕಡೆ ಹೆಚ್ಚಿನ ಗಮನ ವಹಿಸಬೇಕು ಹಾಗೂ ವರದಿಯನ್ನು ಸ್ಪಷ್ಟವಾಗಿ ಉಚ್ಚಾರಿಸಬೇಕು. ಇದೊಂದು ರೀತಿಯ ಟಾಸ್ಕ್‌ ಇದ್ದಂತೆ.
Photo Credit : NewsKarnataka

ದೆಹಲಿ:  ಪತ್ರಿಕೋಧ್ಯಮ ಕ್ಷೇತ್ರದಲ್ಲಿ ವರದಿಗಾರಿಕೆ ಒಂದು ಕಷ್ಟಕರವಾದದ್ದು,ಟಿವಿ ಸುದ್ದಿ ವರದಿಗಾರರು ಕೂಡ ತಮ್ಮ ವರದಿಯಲ್ಲಿ ವಿಷೇಶ ಗಮನ ವಹಿಸಬೇಕಾಗುತ್ತದೆ. ನೇರ ಪ್ರಸಾರದ ಸಮಯದಲ್ಲಿ ವರದಿಗಾರ ತನ್ನ ಪದಗಳ ಕಡೆ ಹೆಚ್ಚಿನ ಗಮನ ವಹಿಸಬೇಕು ಹಾಗೂ ವರದಿಯನ್ನು ಸ್ಪಷ್ಟವಾಗಿ ಉಚ್ಚಾರಿಸಬೇಕು. ಇದೊಂದು ರೀತಿಯ ಟಾಸ್ಕ್‌ ಇದ್ದಂತೆ.

ಆದರೂ ಒಮ್ಮೊಮ್ಮೆ ತಿಳಿಯದೆ ತಪ್ಪುಗಳು ಆಗುವ ಸಾದ್ಯತೆ ಇರುತ್ತವೆ. ಈ ಸಂದರ್ಭವನ್ನು ಕೂಡ ಸಂಬಾಳಿಸಲು ತಯಾರಿರಬೇಕು. ಇದೀಗ ಇದೇ ರೀತಿಯ ಒಂದು ಘಟನೆ ನಡೆದಿದ್ದು, ನೇರಪ್ರಸಾರದ ವೇಳೆ ಸಿಎನ್‌ಬಿಸಿ-ಟಿವಿ 18 ವರದಿಗಾರ ಮಂಗಳವಾರದಂದು ಅವಾಚ್ಯ ಶಬ್ದವನ್ನು ಬಳಸಿದ್ದಾನೆ.

ವರದಿಗಾರ ಅಶ್ಮಿತ್‌ ಇಂದು ಪತಂಜಲಿ ಕೇಸ್‌ನ್ನು ವಿವರಿಸುವ ನೇರಪ್ರಸಾರದ ವೇಳೆ ಅನುಚಿತ ಪದವನ್ನು ಉಪಯೋಗಿಸಿ ನಾಚಿಕೆ ಆಗುವಂತೆ ಮಾಡಿದ್ದಾರೆ. ತನ್ನ ತಪ್ಪು ಅರಿತಾನಾದರೂ ತುಂಬಾ ತಡವಾಗಿದ್ದು ಎಲ್ಲೆಡೆ ಪ್ರಸಾರವಾಗಿತ್ತು. ಈ ವೇಳೆ ಎಚ್ಚೆತ್ತ ಸುದ್ದಿ ನಿರೂಪಕಿ ತಕ್ಷಣ ವರದಿ ತಡೆದು ʻಮತ್ತೊಮ್ಮೆ ನಿಮ್ಮನ್ನು ಮಾತಾನಾಡಿಸುತ್ತೇವೆ,ನಮಗೆ ನಿಮ್ಮ ದ್ವನಿ ಸ್ಪಷ್ಟವಿಲ್ಲ ಎಂದು ಹೇಳುವ ಮೂಲಕ ಪರಿಸ್ಥಿತಿಯನ್ನು ಸರಿಪಡಿಸಲು ಪ್ರಯತ್ನಿಸುತ್ತಾರೆ.

ಈ ಸಂಬಂಧ ʻಇಂದು ಮುಂಜಾನೆ ನೇರ ಪ್ರಸಾರದಲ್ಲಿ, ವರದಿಗಾರನು ತಾನು ಪ್ರಸಾರವಾಗುತ್ತಿರುವುದನ್ನು ಅರಿತುಕೊಳ್ಳದೆ ಅನುಚಿತ ಭಾಷೆಯನ್ನು ಬಳಸಿದನು. ತಪ್ಪಿಗಾಗಿ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ ಮತ್ತು ನಾವು ಉನ್ನತ ಗುಣಮಟ್ಟವನ್ನು ಎತ್ತಿಹಿಡಿಯುವುದನ್ನು ಖಚಿತಪಡಿಸಿಕೊಳ್ಳಲು ಇನ್ನಷ್ಟು ಶ್ರಮಿಸುತ್ತೇವೆ.ʼ ಎಂದು ಸಿಎನ್‌ಬಿಸಿ-ಟಿವಿ 18 ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕ್ಷಮೆಯಾಚಿಸಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು