ನವದೆಹಲಿ: ಕೆಲಸಕ್ಕೆಂದು ದಕ್ಷಿಣ ಏಷ್ಯಾ ರಾಷ್ಟ್ರ ಲಾವೋಸ್ ಹೋಗಿದ್ದ ಭಾರತೀರಯರ ತೊಣದರೆಗೆ ಸಿಲುಕಿಕೊಂಡಿದ್ದರು ಇದೀಗ ಈ ಸಂಬಂಧ 17 ಮಂದಿಯನ್ನು ರಕ್ಷಿಸಿ ಭಾರತಕ್ಕೆ ಕಳುಹಿಸಲಾಗಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಮಾಹಿತಿ ನೀಡಿದ್ದಾರೆ.
ಲಾವೋಸ್ನ ಗೋಲ್ಡನ್ ಟ್ರಯಾಂಗಲ್ ವಿಶೇಷ ಆರ್ಥಿಕ ವಲಯದಲ್ಲಿ ಕಾಲ್-ಸೆಂಟರ್ ಹಗರಣಗಳು ಮತ್ತು ಕ್ರಿಪ್ಟೋ ಕರೆನ್ಸಿ ವಂಚನೆಯಲ್ಲಿ ಭಾಗಿಯಾಗಿರುವ ಮೋಸಗಾರ ಸಂಸ್ಥೆಗಳಿಂದ ಥೈಲ್ಯಾಂಡ್ ಅಥವಾ ಲಾವೋಸ್ನಲ್ಲಿ ಉದ್ಯೋಗ ಒದಗಿಸುವುದಾಗಿ ಭಾರತೀಯ ಪ್ರಜೆಗಳನ್ನು ವಂಚಿಸಲಾಗುತ್ತಿದೆ. ವಿಶೇಷವಾಗಿ ‘ಡಿಜಿಟಲ್ ಸೇಲ್ಸ್ ಮತ್ತು ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ಸ್’ ಮುಂತಾದ ಕ್ಷೇತ್ರಗಳಲ್ಲಿ ವಂಚನೆ ಅಧಿಕ ಎಂದು ಮೂಲಗಳು ತಿಳಿಸಿವೆ.
ಕಾಂಬೋಡಿಯಾದಲ್ಲಿ ಲಾಭದಾಯಕ ಉದ್ಯೋಗಾವಕಾಶಗಳ ಭರವಸೆ ನೀಡಿ ಮಾನವ ಕಳ್ಳಸಾಗಣೆ ನಡೆಸುವ ವಂಚಕರ ಬಲೆಗೆ ಬೀಳದಂತೆ ವಿದೇಶಾಂಗ ಸಚಿವಾಲಯ ಭಾರತೀಯ ಪ್ರಜೆಗಳಿಗೆ ಎಚ್ಚರಿಕೆ ನೀಡಿದ ನಂತರ ಈ ಬೆಳವಣಿಗೆ ಕಂಡು ಬಂದಿದೆ ಎನ್ನಲಾಗಿದೆ.
ಈ ಕುರಿತು ಜೈಶಂಕರ್ ʼಮೋದಿ ಕಿ ಗ್ಯಾರಂಟಿ’ ದೇಶ ಮತ್ತು ವಿದೇಶಗಳಲ್ಲಿ ಕೆಲಸ ಮಾಡುತ್ತದೆ. ಲಾವೋಸ್ಗೆ ಕೆಲಸಕ್ಕೆಂದು ಹೋಗಿ ಸುರಕ್ಷಿತವಲ್ಲದ ಕೆಲಸಗಳಲ್ಲಿ ತೊಡಗಿಸಿದ್ದ ಹಾಗೂ ಕಾನೂನುಬಾಹಿರ ಕೆಲಸಕ್ಕೆ ಪ್ರೇರೇಪಿಸುವವರ ಜಾಲಕ್ಕೆ ಸಿಲುಕಿದ್ದ 17 ಭಾರತೀಯರನ್ನು ತಾಯ್ನಾಡಿಗೆ ಕರೆತರಲಾಗಿದೆ. ಇದು ಲಾವೋಸ್ನಲ್ಲಿನ ನಮ್ಮ ರಾಯಭಾರ ಕಚೇರಿ ಅಧಿಕಾರಿಗಳ ಪರಿಶ್ರಮಕ್ಕೆ ಹಿಡಿದ ಕನ್ನಡಿʼʼ ಎಕ್ಸ್ನಲ್ಲಿ ಪೋಟೋ ಸಹಿತ ಬರೆದಿದ್ದಾರೆ.
Modi ki Guarantee works for all at home and abroad.
17 Indian workers, lured into unsafe and illegal work in Laos, are on their way back home.
Well done, @IndianEmbLaos. Thank Lao authorities for their support for the safe repatriation. pic.twitter.com/KgIM56YJkE
— Dr. S. Jaishankar (Modi Ka Parivar) (@DrSJaishankar) April 6, 2024