News Karnataka Kannada
Thursday, May 02 2024
ದೆಹಲಿ

ನನಗೆ ಅಧಿಕಾರದ ಆಸೆಯೇ ಇಲ್ಲ; ರಾಹುಲ್​ ಗಾಂಧಿ

Mumbai: Sarwakar's grandson says he will file complaint against Rahul Gandhi
Photo Credit : IANS

ನವದೆಹಲಿ : ನಾನು ಅಧಿಕಾರದ ಶಕ್ತಿ ಸ್ಥಾನದಲ್ಲೇ ಜನಿಸಿದೆ. ಆದರೆ, ಅದರ ಬಗ್ಗೆ ನನಗೆ ಆಸಕ್ತಿಯೇ ಬೆಳೆಯಲಿಲ್ಲ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹೇಳಿದ್ದಾರೆ.

ನವದೆಹಲಿಯ ಜವಾಹರ ಭವನದಲ್ಲಿ ‘ದಿ ದಲಿತ್​ ಟ್ರೂತ್​’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ರಾಹುಲ್​ ಗಾಂಧಿ, ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗೆ ಅಧಿಕಾರದ ಬಗ್ಗೆ ಆಸಕ್ತಿಯೇ ಇಲ್ಲ.

ದೇಶವನ್ನು ಅರ್ಥ ಮಾಡಿಕೊಳ್ಳಲು ಈಗ ಪ್ರಯತ್ನಿಸುತ್ತಿದ್ದೇನೆ ಎಂದರು. ಉತ್ತರ ಪ್ರದೇಶದ ಚುನಾವಣೆಯಲ್ಲಿ ಮಾಯಾವತಿ ಅವರು ಸ್ಪರ್ಧಿಸಲಿಲ್ಲ. ಮೈತ್ರಿ ರಚನೆ ಬಗ್ಗೆ ಸಂದೇಶ ಕಳುಹಿಸಿದೆವು. ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವುದಾಗಿ ಹೇಳಿದೆವು. ಅವರು ಯಾವುದಕ್ಕೂ ಸ್ಪಂದಿಸಲಿಲ್ಲ ಎಂದು ರಾಹುಲ್​ ಟೀಕಿಸಿದರು.

ಕೇಂದ್ರ ತನಿಖಾ ಸಂಸ್ಥೆಗಳಾದ ಸಿಬಿಐ, ಇಡಿ ಹಾಗೂ ಪೆಗಾಸಸ್​ಗಳಿಗೆ ಬೆದರಿದ ಮಾಯಾವತಿ ಅವರು ನಮ್ಮ ಜೊತೆ ಮಾತನಾಡಲೂ ಮುಂದಾಗಲಿಲ್ಲ. ಆ ಮೂಲಕ ಬೆಜೆಪಿ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು ಎಂದು ರಾಹುಲ್​ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು