ಆದೇಶವನ್ನು ಮೀರಿ ನಡೆದುಕೊಂಡರೆ ಸೆಕ್ಷನ್ 33 ಎ ಜಲ (ಸಂರಕ್ಷಣೆ ಮತ್ತು ಮಾಲಿನ್ಯ ತಡೆ) ನೀತಿ. 1974ರ ಅಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಿಯಮ ಉಲ್ಲಂಘಿಸಿದವರಿಗೆ ದಂಡ ಹಾಗೂ 6 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಡಿಪಿಸಿಸಿ ಎಚ್ಚರಿಕೆ ನೀಡಿದೆ.
ದುರ್ಗಾ ಮೂರ್ತಿ ಸೇರಿದಂತೆ ಯಾವುದೇ ಮೂರ್ತಿಗಳನ್ನು ತಯಾರಿಸುವ ವೇಳೆ ನೈಸರ್ಗಿಕ ಮಣ್ಣನ್ನು ಮಾತ್ರ ಬಳಸಬೇಕು. ರಾಸಾಯನಿಕ ವಸ್ತುಗಳನ್ನು ಬಳಕೆ ಮಾಡಿದ ಬಣ್ಣಗಳನ್ನು ಬಳಿಯಬಾರದು ಎಂದು ಮೂರ್ತಿ ತಯಾರಕರಿಗೆ ಡಿಪಿಸಿಸಿ ತಿಳಿಸಿದೆ.
ಮನೆಯಲ್ಲಿ ಬಕೆಟ್ಗಳ ಸಹಾಯದಿಂದ ದೇವಿಯ ಮೂರ್ತಿಯನ್ನು ವಿಸರ್ಜಿಸಬಹುದು. ಆದರೆ ಸಾರ್ವಜನಿಕ ಸ್ಥಳಗಳಲ್ಲಿರುವ ಕೆರೆ, ಹಳ್ಳ, ನದಿಗಳಲ್ಲಿ ಮೂರ್ತಿ ವಿಸರ್ಜನೆ ಮಾಡಬಾರದು ಎಂದು ಡಿಪಿಸಿಸಿ ಪ್ರಕಟಣೆ ಮೂಲಕ ಆದೇಶಿಸಿದೆ