ಕಿರುತೆರೆ ನಟ ಸಿದ್ಧಾರ್ಥ್ ಶುಕ್ಲಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೇವಲ 40ರ ಹರೆಯದಲ್ಲಿ ಫಿಟ್ ಆಂಡ್ ಫೈನ್ ಆಗಿದ್ದ ಸಿದ್ಧಾರ್ಥ್ ಜಗತ್ತನ್ನು ಬಿಟ್ಟು ಹೋಗಿದ್ದನ್ನು ಅಭಿಮಾನಿಗಳು ಈಗಲೂ ನಂಬುತ್ತಿಲ್ಲ. ಸಿದ್ಧಾರ್ಥ್ ನಿಧನದ ನಾಲ್ಕು ದಿನದ ನಂತರ ಅವರು ಕುಟುಂಬದವರು ಶ್ರದ್ಧಾಂಜಲಿ ಸಭೆ ನಡೆಸುತ್ತಿದ್ದಾರೆ. ಈ ಸಭೆಯಲ್ಲಿ ಅಭಿಮಾನಿಗಳು ಪಾಲ್ಗೊಳ್ಳಬಹುದಾಗಿದೆ.
ನಟ ಕರಣ್ವೀರ್ ಬೊಹ್ರಾ ಶ್ರದ್ಧಾಂಜಲಿ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರ ಕುಟುಂಬದವರು ಶ್ರದ್ಧಾಂಜಲಿ ಸಭೆ ಏರ್ಪಡಿಸಿದ್ದು, ಎಲ್ಲ ಅಭಿಮಾನಿಗಳಿಗೂ ಆನ್ಲೈನ್ ಮೂಲಕ ಸೇರುವ ಅವಕಾಶ ಇದೆ ಎಂದಿದ್ದಾರೆ.
ನಟ ಸಿದ್ಧಾರ್ಥ್ ಶುಕ್ಲಾ ಶ್ರದ್ಧಾಂಜಲಿ ಸಭೆ : ಅಭಿಮಾನಿಗಳಿಗೂ ಇದೆ ಆಹ್ವಾನ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.