ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು 86ನೇ ಆವೃತ್ತಿಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿದ ಮಾತನಾಡಿದರು. ಈ ವೇಳೆ ಇತ್ತೀಚಿಗೆ ನಿಧನರಾದಂತ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರನ್ನು ಪ್ರಧಾನಿ ಸ್ಮರಿಸಿದರು.
ಪ್ರತಿ ತಿಂಗಳ ಕೊನೆಯ ಭಾನುವಾರದಂದು ಮನ್ ಕಿ ಬಾತ್ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಇಂದಿನ 86ನೇ ಆವೃತ್ತಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು.
ಇಂದಿನ ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿಯವರು ಭಾರತವು ಅಮೂಲ್ಯವಾದ ಕಲಾಕೃತಿಗಳನ್ನು ಮರಳಿ ತರುವಲ್ಲಿ ಯಶಸ್ವಿಯಾಗಿದೆ. 2014ರಿಂದ ಈ ಪ್ರಕ್ರಿಯೆ ಪ್ರಗತಿಯಲ್ಲಿದೆ. ಒಂದು ಸಾವಿರ ವರ್ಷಗಳ ಹಳೆಯದಾದಂತ ಅವಲೋಕಿತೇಶ್ವರ ಪದ್ಮಪಾಣಿ ವಿಗ್ರಹ ಕಳವಾಗಿತ್ತು. ಈ ವಿಗ್ರಹವನ್ನು ಮತ್ತೆ ಪತ್ತೆ ಹಚ್ಚಿ, ಮರಳಿ ಪಡೆದಿದ್ದೇವೆ ಎಂದರು.
ಕಳೆದ ಏಳು ವರ್ಷಗಳಲ್ಲಿ 200ಕ್ಕೂ ಹೆಚ್ಚು ಅಮೂಲ್ಯ ವಿಗ್ರಹಗಳನ್ನು ಭಾರತ ಮರಳಿ ತಂದಿದೆ. ದೇಶದ ವಿವಿಧ ಭಾಗಗಳಲ್ಲಿ ಪೂಜ್ಯತೆ, ಸಾಮರ್ಥ್ಯ, ಕೌಶಲ್ಯತೆ ಸೇರಿದಂತೆ ವೈವಿದ್ಯಮಯವಾದಂತ ಉತ್ತಮ ವಿಗ್ರಹಗಳು ತಯಾರಿಸಲ್ಪಡುತ್ತಿವೆ. ಇವು ಭಾರತೀಯ ಶಿಲ್ಪ ಕಲೆಯ ಅದ್ಬುತ ಕಲಾತ್ಮಕತೆಗೆ ಸಾಕ್ಷಿಯಾಗಿವೆ ಎಂದರು.