ದೆಹಲಿ : ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದ ಬಗ್ಗೆ ದೇಶಾದ್ಯಂತ ರೈತರನ್ನು ಜಾಗೃತಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಒತ್ತಡ ತರಲು ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಅಕ್ಟೋಬರ್ 2 ಗಾಂಧಿ ಜಯಂತಿ ದಿನದಂದು ಕಿಸಾನ್ ಸ್ವರಾಜ್ ಯಾತ್ರೆ ನಡೆಸಲು ರಾಷ್ಟ್ರೀಯ ರೈತ ಮುಖಂಡರ ಸಭೆಯಲ್ಲಿ ನಿರ್ಣಯಿಸಲಾಯಿತು.
ಈ ನಿರ್ಣಯವನ್ನು ಸಂಯುಕ್ತ ಕಿಸಾನ್ ಮೋರ್ಚಾ ಸಮಿತಿಯ ಮುಂದೆ ಮಂಡಿಸಿ ಕಿಸಾನ್ ಯಾತ್ರೆಯ ಮಾರ್ಗಸೂಚಿ ಕಾರ್ಯಕ್ರಮಗಳನ್ನು ಯೋಚಿಸಲು ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್ ಹಾಗೂ ಯದುವೀರ ಸಿಂಗ್ ರವರಿಗೆ ಜವಾಬ್ದಾರಿ ನೀಡಲಾಯಿತು.
ಕೇಂದ್ರ ಕೃಷಿ ಕಾಯ್ದೆಗಳ ಮಾರಕ ಪರಿಣಾಮಗಳು ಮತ್ತು ಎಂಎಸ್ಪಿ ಶಾಸನಬದ್ಧ ಖಾತ್ರಿ ಬೆಲೆ ಆಗಬೇಕು ಎನ್ನುವ ಬೇಡಿಕೆ ಈಡೇರಿಕೆಗಾಗಿ ರೈತ ಜಾಗೃತಿ ದೇಶವ್ಯಾಪಿ, ಕಿಸಾನ್ ಸ್ವರಾಜ್ ಯಾತ್ರೆ ಅಕ್ಟೋಬರ್ 2 ಗಾಂಧೀಜಯಂತಿಯ ದಿನದಿಂದ ಆರಂಭಿಸುವುದಾಗಿ ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ರೈತ ಮುಖಂಡರ ಎರಡನೇ ದಿನದ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.