ರಾಯ್ಪುರ್: ಸಶಸ್ತ್ರ ಪಡೆ (ಸಿಎಎಫ್) ಕಮಾಂಡರ್ ಒಬ್ಬರನ್ನು ನಕ್ಸಲ್ ನಿಗ್ರಹ ಪಡೆಯ ಶಿಬಿರದ ಸಮೀಪವೇ ಮಾವೋವಾದಿಗಳು ಹತ್ಯೆಗೈದ ಘಟನೆ ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ನಡೆದಿದೆ.
ಕಮಾಂಡರ್ ತೇಜು ರಾಮ್ ಭುರ್ಯ ಹತ್ಯೆಗೀಡಾದ ಕಮಾಂಡರ್ ಆಗಿದ್ದಾರೆ. ಅವರು ಶಿಬಿರದಿಂದ ಸಿಬ್ಬಂದಿ ಜೊತೆ ಸಮೀಪದ ಮಾರುಕಟ್ಟೆಗೆ ತರಕಾರಿ ತರಲು ತೆರಳುತ್ತಿದ್ದರು. ಈ ವೇಳೆ ಮಾವೋವಾದಿಗಳ ತಂಡ ಏಕಾಏಕಿ ದಾಳಿ ನಡೆಸಿದೆ. ಈ ವೇಳೆ ತೇಜು ರಾಮ್ ಅವರಿಗೆ ಕೊಡಲಿಯಿಂದ ನಕ್ಸಲರು ಹಲ್ಲೆ ನಡೆಸಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೂಡಲೇ ಹೆಚ್ಚುವರಿ ಸೇನೆ ಅಲ್ಲಿಗೆ ತೆರಳಿದ್ದು ಅಷ್ಟರಲ್ಲೇ ಮಾವೋವಾದಿಗಳ ತಂಡ ಅಲ್ಲಿಂದ ಪರಾರಿಯಾಗಿದೆ.
ಇನ್ನು ದಾಳಿ ನಡೆಸಿದ ನಕ್ಸಲರ ಪತ್ತೆಗಾಗಿ ಸಿಎಎಫ್ ಮತ್ತು ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್ ತಂಡಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ.