News Karnataka Kannada
Wednesday, May 08 2024
ಛತ್ತೀಸಗಢ

ಛತ್ತೀಸ್‌ಗಢ: ದಿನಸಿ ವ್ಯಾಪಾರಿಯನ್ನು ಹತ್ಯೆ ಮಾಡಿದ ನಕ್ಸಲರು

ಉತ್ತರಪ್ರದೇಶದ ಕಾಸ್‌ಗಂಜ್‌ನಲ್ಲಿ ಟ್ರ್ಯಾಕ್ಟರ್ ಟ್ರಾಲಿ ಕೊಳಕ್ಕೆ ಬಿದ್ದು  15 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡ ಘಟನೆ ನಡೆದಿದೆ.
Photo Credit :

ಛತ್ತೀಸ್‌ಗಢ : ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು 50 ವರ್ಷದ ಗ್ರಾಮಸ್ಥನನ್ನು ಥಳಿಸಿ, ಭೀಕರವಾಗಿ ಕೊಂದಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಒಂದೇ ವಾರದಲ್ಲಿ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ಮಾಡಿರುವ ಐದನೇ ಹತ್ಯೆ ಇದಾಗಿದೆ.

ಈ ಘಟನೆ ಮಂಗಳವಾರ ಮಧ್ಯರಾತ್ರಿ ಕುಟ್ರು ಪೊಲೀಸ್ ಠಾಣಾ ವ್ಯಾಪ್ತಿಯ ಕೆತುಲ್ನಾರ್ ಗ್ರಾಮದಲ್ಲಿ ನಡೆದಿದೆ ಎಂದು ಇನ್ಸ್‌ಪೆಕ್ಟರ್ ಜನರಲ್ ಸುಂದರರಾಜ್ ಪಿ ತಿಳಿಸಿದ್ದಾರೆ. ನಕ್ಸಲರಿಂದ ಹತ್ಯೆಯಾಗಿರುವ ಐವತ್ತು ವರ್ಷದ ಗ್ರಾಮಸ್ಥನನ್ನ ಜಗತ್ ಸೋಡಿ ಎಂದು ಗುರುತಿಸಲಾಗಿದೆ. ಮೃತ ದುರ್ದೈವಿ ಸಣ್ಣ ದಿನಸಿ ಅಂಗಡಿಯನ್ನು ನಡೆಸುತ್ತಿದ್ದ, ಅವರನ್ನ ಹಿಡಿದುಕೊಂಡು ಅಪರಿಚಿತ ನಕ್ಸಲರ ಗುಂಪೊಂದು ಹೊಡೆದು ಕೊಂದಿದೆ ಎಂದು ಮಾಹಿತಿ ನೀಡಿರುವ ಪೊಲೀಸರು, ಹತ್ಯೆಯ ಹಿಂದಿನ ಯಾವುದೇ ಉದ್ದೇಶವನ್ನು ಬಹಿರಂಗಪಡಿಸಿಲ್ಲ.

ಕೃತ್ಯ ನಡೆದ ಸ್ಥಳದಲ್ಲಿ ತನಿಖೆ ನಡೆಸಿದ ನಂತರ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಒಂದು ವಾರದಲ್ಲಿ, ಬಸ್ತಾರ್ ವಿಭಾಗದ ಅಡಿಯಲ್ಲಿ ಬರುವ ಬಿಜಾಪುರ ಜಿಲ್ಲೆಯಲ್ಲಿ, ನಕ್ಸಲರು ತಮ್ಮ ಇಬ್ಬರು ಸಹಚರರು, ಮೂವರು ನಾಗರಿಕರು ಸೇರಿದಂತೆ ಐವರನ್ನು ಕೊಂದಿದ್ದಾರೆ. ಇದಕ್ಕೂ ಮೊದಲು, 2020 ರಲ್ಲಿ ಬಸ್ತಾರ್ ವಿಭಾಗದಲ್ಲಿ ಕನಿಷ್ಠ 47 ಜನ, 2021 ರಲ್ಲಿ 34 ನಾಗರಿಕರನ್ನ ನಕ್ಸಲರು ಕೊಂದಿದ್ದಾರೆ. ಜೊತೆಗೆ ಈ ವಿಭಾಗದಲ್ಲಿ 2020 ರಲ್ಲಿ 40 ಮತ್ತು 2021 ರಲ್ಲಿ 51ಜನ ನಕ್ಸಲರನ್ನ ಗುಂಡಿಕ್ಕಿ ಕೊಂದಿದ್ದರು, ಇವರ ಕಾಟ ತಪ್ಪಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು