News Karnataka Kannada
Friday, May 17 2024
ಬಿಹಾರ

ಪಾಟ್ನಾ: ನಿತೀಶ್‌ ಕುಮಾರ್‌ ಅವರಿಗೆ ನಮ್ಮ ಬೆಂಬಲ, ಮಾಂಝಿ ಹೇಳಿಕೆ

Our support to Nitish Kumar, says Manjhi
Photo Credit : IANS

ಪಾಟ್ನಾ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಎಚ್‌ಎಎಂ ಮುಖ್ಯಸ್ಥ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರು ತಮ್ಮ ಜೀವನದ ಕೊನೆಯ ಉಸಿರು ಇರುವವರೆಗೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಇರುತ್ತೇನೆ ಎಂದು ಹೇಳಿದ್ದಾರೆ. ಮೌಂಟೆನ್‌ ಮ್ಯಾನ್‌ ದಶರಥ್ ಮಾಂಝಿಗೆ ಭಾರತ ರತ್ನ ನೀಡಬೇಕೆಂದು ಒತ್ತಾಯಿಸಿ ಮಾಂಝಿ ಅವರು ಅಮಿತ್ ಶಾ ಅವರನ್ನು ಭೇಟಿ ಮಾಡಿದರು.

“ಎನ್‌ಡಿಎಗೆ ಹೋಗುವ ಹೋಗುವುದಿಲ್ಲ. ಕೊನೆಯ ಉಸಿರು ಇರುವವರೆಗೂ ನಿತೀಶ್‌ ಕುಮಾರ್‌ ಅವರೊಂದಿಗೆ ಇರುವುದಾಗಿ ಪ್ರಮಾಣ ಮಾಡಿದ್ದೇನೆ. ನಿತೀಶ್‌ ಕುಮಾರ್‌ಗೆ ಪ್ರಧಾನಿಯಾಗುವ ಎಲ್ಲ ಸಾಮರ್ಥ್ಯವಿದ್ದು, ದೇಶದ ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. “ದೇಶದ ಸಣ್ಣ ಪಕ್ಷಗಳನ್ನು ನಾಶಮಾಡಲು ಹೊರಟಿರುವ ಏಕ ಸಿದ್ಧಾಂತವನ್ನು ಹೊಂದಿರುವ ಬಿಜೆಪಿಯೊಂದಿಗೆ ನಾವು ಹೋಗುವುದು ಕನಸಿನ ಮಾತು ಎಂದು ಅವರು ಈ ಸಂದರ್ಭ ಸ್ಪಷ್ಟಪಡಿಸಿದ್ದಾರೆ. ದಶರಥ್ ಮಾಂಝಿ ಅವರಿಗೆ ಭಾರತ ರತ್ನದ ನೀಡುವಂತೆ ಒತ್ತಾಯಿಸಿ ಗಯಾ ಜಿಲ್ಲೆಯ ಅವರ ಸ್ವಗ್ರಾಮ ಗಹ್ಲೋರ್‌ನಿಂದ ಪಾದಯಾತ್ರೆ ಆರಂಭಿಸಿ, ಏಪ್ರಿಲ್ 1 ರಂದು ದೆಹಲಿಯ ಜಂತರ್ ಮಂತರ್ ತಲುಪಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು