ಪಾಟ್ನಾ: ಪಕ್ಷದ ಹಿರಿಯ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅಲಭ್ಯರಾಗಿರುವ ಕಾರಣ ಜೂನ್ 12 ರಂದು ನಿಗದಿಯಾಗಿದ್ದ ಪ್ರತಿಪಕ್ಷಗಳ ಏಕತೆ ಸಭೆಯನ್ನು ಜೂನ್ 23 ಕ್ಕೆ ಮುಂದೂಡುವ ಸಾಧ್ಯತೆಯಿದೆ.
ದಿನಾಂಕವನ್ನು ಅಂತಿಮಗೊಳಿಸುವ ಮೊದಲು ಎಲ್ಲಾ ಸಮಾನ ಮನಸ್ಕ ಪಕ್ಷಗಳ ಒಮ್ಮತವನ್ನು ತೆಗೆದುಕೊಳ್ಳಲಾಗುತ್ತಿದೆ. ರಾಹುಲ್ ಗಾಂಧಿ ಅವರು ವಿದೇಶ ಪ್ರವಾಸದಲ್ಲಿರುವುದು ಸಭೆ ಮುಂದೂಡಿಕೆಗೆ ಮುಖ್ಯ ಕಾರಣ ಎನ್ನಲಾಗಿದೆ.
ರಾಹುಲ್ ವಿದೇಶ ಪ್ರವಾಸದಲ್ಲಿರುವುದು ಸಭೆ ಸಭೆ ಮುಂದೂಡಿಕೆಗೆ ಕಾರಣ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಪಾಟ್ನಾದಲ್ಲಿ ಸಭೆ ನಡೆಸಲು ಹಿಂದೇಟು ಹಾಕಿದ್ದಾರೆ.
ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮಹಾ ಯಶಸ್ಸಿಗೆ ಕಾರಣವಾಗಿದ್ದು, ಪಕ್ಷದಲ್ಲಿ ಹುರುಪು ತುಂಬಿದೆ. ಇದು ಮುಂಬರುವ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಢ ಚುನಾವಣೆ ಮತ್ತು ಲೋಕಸಭೆ ಚುನಾವಣೆಗೆ ಕೈ ಪಕ್ಷಕ್ಕೆ ನೆರವಾಗಲಿದೆ.