ಪೂರ್ಣಿಯಾ: ಕಾಂಗ್ರೆಸ್ಸ್ ನ ಭಾರತ್ ಜೋಡೋ ನ್ಯಾಯ ಯಾತ್ರೆ ಇದೀಗ ಬಿಹಾರಕ್ಕೆ ಕಾಲಿಟ್ಟಿದ್ದು, ಜನರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ರೈತರು ತಮ್ಮ ಮೇಲೆ ವಿಶ್ವಾಸವಿಡುವಂತೆ ಕೇಳಿಕೊಂಡಿದ್ದಾರೆ.
ಮೋದಿ ನೇತೃತ್ವದ ಸರ್ಕಾರ ರೈತರ ವಿಶ್ವಾಸವನ್ನು ಕಳೆದುಕೊಂಡಿದ್ದು, ಅವರ ಭಯವನ್ನು ಹೋಗಲಾಡಿಸುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ಸಿಗೆ ಒಂದು ಅವಕಾಸ ಕೊಟ್ಟರೆ ಆ ವಿಶ್ವಾಸವನ್ನು ಮತ್ತೆ ಗಳಿಸಲು ಪ್ರಯತ್ನಿಸುತ್ತೇವೆ ಎಂದು ವಿಶ್ವಾಸ ನೀಡಿದ್ದಾರೆ.
ಅವರ ಈ ಹೇಳಿಕೆಗೆ ಜನ ಚಪ್ಪಾಳೆಯ ಮೂಲಕ ಸ್ಪಂದಿಸಿದ್ದು, ತಮ್ಮ ಹೇಳಿಕೆಗೆ ಇನ್ನಷ್ಟು ಬಲ ತುಂಬಲು ಕಾಂಗ್ರೆಸ್ ಸರ್ಕಾರದ ರೈತಪರ ಕೆಲಸಗಳ ಪಟ್ಟಿಯನ್ನು ಬಿಚ್ಚಿಟ್ಟ ರಾಹುಲ್, ʼಇದು ಕೇವಲ ಪೊಳ್ಳು ಭರವಸೆಯಲ್ಲ ಎಂಬುದಕ್ಕೆ ನಮ್ಮ ಹಿಂದಿನ ಕೆಲಸಗಳೇ ಸಾಕ್ಷಿ. ಛತ್ತೀಸ್ಗಢ ಮತ್ತು ರಾಜಸ್ಥಾನಗಳಲ್ಲಿ ರೈತರು ತಮ್ಮ ಬೆಲೆಗಳಿಗೆ ಉತ್ತಮ ಬೆಲೆ ಪಡೆದಿದ್ದಾರೆʼ ಎಂದರು.