News Karnataka Kannada
Thursday, May 02 2024
ಬಿಹಾರ

ರಾಹುಲ್ ಗಾಂಧಿಯೊಂದಿಗಿನ ಮುನಿಸಿನ ಮಾತಿನ ನಂತರ ಕಮಲದ ಕೈ ಹಿಡಿದ ನಿತೀಶ್

ಹತ್ತು ವರ್ಷದ ಅವಧಿಯಲ್ಲಿ ಐದನೆ ಬಾರಿ ಪಕ್ಷ ಬದಲಿಸಿರುವ ನಿತೀಶ್ ಕುಮಾರ್, ತಾವು ೨೦೨೨ರಲ್ಲಿ ತೊರೆದು ಬಂದಿದ್ದ ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಿ ಸಿಎಂ ಗದ್ದುಗೆಗೇರಿದ್ದಾರೆ.
Photo Credit : News Kannada

ನವದೆಹಲಿ: ಹತ್ತು ವರ್ಷದ ಅವಧಿಯಲ್ಲಿ ಐದನೆ ಬಾರಿ ಪಕ್ಷ ಬದಲಿಸಿರುವ ನಿತೀಶ್ ಕುಮಾರ್, ತಾವು ೨೦೨೨ರಲ್ಲಿ ತೊರೆದು ಬಂದಿದ್ದ ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಿ ಸಿಎಂ ಗದ್ದುಗೆಗೇರಿದ್ದಾರೆ.

ತಮ್ಮ ಪಕ್ಷ ಬದಲಾವಣಾ ಸ್ವಭಾವದಿಂದ ರಾಜಕೀಯ ವಲಯದಲ್ಲಿ ʼಪಲ್ಟು ಕುಮಾರ್ʼ ಎಂದು ಹೆಸರು ಪಡೆದಿರುವ ನಿತೀಶ್ ಬಿಹಾರದ ಮುಖ್ಯಮಂತ್ರಿಯಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ್ದು, ಬಿಜೆಪಿಯ ಇಬ್ಬರನ್ನು ಉಪಮುಖ್ಯಮಂತ್ರಿಗಳಾಗಿ ನೇಮಿಸಲಾಗಿದೆ.

ಮುಂಬರುವ ದಿನಗಳಲ್ಲಿ ಸೀಟು ಹಂಚಿಕೆಯ ವಿಷಯವಾಗಿ ಚರ್ಚೆ ನಡೆಯಲಿದ್ದು, HAM ಪಕ್ಷವನ್ನೂ ಸೇರಿಸಿಕೊಂಡು ಈ ಪ್ರಕ್ರಿಯೆ ನಡೆಯಲಿದೆ.

ಮೂಲಗಳ ಪ್ರಕಾರ, ಜ.೧೩ರಂದು ನಡೆದ ವರ್ಚುವಲ್ ಮೀಟಿಂಗ್ ನ ನಂತರ ಕೋಪದಲ್ಲಿದ್ದ ನಿತೀಶ್, ಮೈತ್ರಿಕೂಟ ಬಿಡುವ ಯೋಚನೆ ಮಾಡಿದ್ದರೆಂದು ತಿಳಿದುಬಂದಿದೆ.

INDIA ಮೈತ್ರಿಕೂಟದಿಂದ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆಯವರನ್ನು ನೇಮಿಸುವಂತೆ ಮಮತಾ ಬ್ಯಾನರ್ಜಿ ಮತ್ತು ಅರವಿಂದ್ ಕೇಜ್ರಿವಾಲ್ ಪ್ರಸ್ತಾಪಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು