News Karnataka Kannada
Monday, May 13 2024
ಅಸ್ಸಾಂ

ಗುವಾಹಟಿ: ರೈಲು ಡಿಕ್ಕಿಯಾಗಿ ಕಾಡಾನೆ ಸಾವು

Guwahati: Elephant dies after being hit by train
Photo Credit : News Kannada

ಗುವಾಹಟಿ: ಸರಕು ಸಾಗಣೆ ರೈಲು ಡಿಕ್ಕಿಯಾಗಿ ಕಾಡಾನೆ ಮೃತಪಟ್ಟ ಘಟನೆ ಡಿಗಾರು-ಪನ್‌ಬರಿ ವಿಭಾಗದಲ್ಲಿ ಗುರುವಾರ ಬೆಳಗ್ಗೆ 7 ಗಂಟೆಗೆ ಸಂಭವಿಸಿದೆ. ಹೀಗಾಗಿ ಆನೆ ಕಾರಿಡಾರ್‌ ಗಳಲ್ಲಿ ಹಾದು ಹೋಗುವ ರೈಲು ಮಾರ್ಗಗಳಲ್ಲಿ ಎಚ್ಚರಿಕೆ ವಹಿಸುವಂತೆ ರೈಲ್ವೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಘಟನೆ ಸಂಭವಿಸಿದ ಸ್ಥಳ ಆನೆ ಕಾರಿಡಾರ್‌ ನಿಂದ ಹೊರಗಿದ್ದು, ಆನೆ ಒಳನುಗ್ಗುವಿಕೆ ಪತ್ತೆ ವ್ಯವಸ್ಥೆ (ಐಡಿಎಸ್) ಯಂತ್ರವನ್ನು ಈ ಪ್ರದೇಶದಲ್ಲಿ ಅಳವಡಿಸಿರದ ಕಾರಣ ಹಳಿಯ ಮೇಲೆ ಆನೆ ಇರುವುದು ಗಮನಕ್ಕೆ ಬಂದಿರಲಿಲ್ಲ. ಗುವಾಹಟಿ ವಿಭಾಗದಲ್ಲಿ ರೈಲ್ವೆ ಇಲಾಖೆ ಆನೆ ಚಲವಲನ ಗುರುತಿಸಲು ಐಡಿಎಸ್‌ ತಂತ್ರಜ್ಞಾನ ಅಳವಡಿಸಿಕೊಂಡಿದ್ದು, ಇದರಿಂದ ಹಲವು ಅಪಘಾತಗಳು ತಪ್ಪಿವೆ.

ಈ ತಂತ್ರಜ್ಞಾನ ಅಳವಡಿಕೆಗೆ ಇಲಾಖೆ 77 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. AI-ಆಧಾರಿತ ಐಡಿಎಸ್ ಸಾಫ್ಟ್‌ವೇರ್‌ ಮೂಲಕ 60 ಕಿ.ಮೀ.ವರೆಗಿನ ಆನೆ ಸೇರಿದಂತೆ, ಕಾಡುಪ್ರಾಣಿಗಳ ಚಲನೆಯನ್ನು ಗುರುತು ಪತ್ತೆ ಮಾಡಬಹುದು. ಅಲ್ಲದೆ ರೈಲು ಹಳಿಗಳಲ್ಲಿ ವಿಧ್ವಂಸಕ ಕೃತ್ಯ, ಭೂಕುಸಿತ ಇತ್ಯಾದಿ ವಿಷಯಗಳನ್ನು ಪತ್ತೆ ಹಚ್ಚುವುದು ಸುಲಭವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು