News Karnataka Kannada
Monday, April 29 2024
ಅಸ್ಸಾಂ

ಉದ್ಯಮಿ ರತನ್ ಟಾಟಾಗೆ ಅಸ್ಸಾಂ ರಾಜ್ಯದ ‘ಉನ್ನತ ನಾಗರಿಕ ಪ್ರಶಸ್ತಿ’

Ratan Tata
Photo Credit :

ಅಸ್ಸಾಂ ರಾಜ್ಯ ಸರ್ಕಾರದಿಂದ ಉದ್ಯಮಿ ರತನ್ ಟಾಟಾಗೆ ರಾಜ್ಯದ ಉನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

ಅಸ್ಸಾಂನಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ನಿರ್ಮಿಸಲು ಟಾಟಾ ಟ್ರಸ್ಟ್ ನೀಡಿದ ಕೊಡುಗೆಯನ್ನು ಗಮನಿಸಿ ಅಸ್ಸಾಂ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿರುವ ‘ಅಸ್ಸಾಂ ಭೈಭವ್’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಟಾಟಾ ಟ್ರಸ್ಟ್ ಸಹಯೋಗದಲ್ಲಿ ಅಸ್ಸಾಂ ಸರ್ಕಾರ ರಾಜ್ಯದಲ್ಲಿ 19 ಕ್ಯಾನ್ಸರ್ ಕೇರ್ ಘಟಕಗಳನ್ನು ಸ್ಥಾಪಿಸುತ್ತಿವೆ. ಇದಕ್ಕೆ 1400 ಕೋಟಿ ರೂ. ವೆಚ್ಚವಾಗಲಿದೆ. 2017ರಲ್ಲಿ ಟಾಟಾ ಸಂಸ್ಥೆಯ ಟ್ರಸ್ಟ್ ಅಸ್ಸಾಂ ನ ಕ್ಯಾನ್ಸರ್ ಚಿಕಿತ್ಸೆಗಾಗಿ 540 ಕೋಟಿ ರೂ. ಗಳನ್ನು ಅನುಮೋದಿಸಿತ್ತು.

‘ಅಸ್ಸಾಂ ರತ್ನ’ ಎಂದು ಕರೆಯಲಾಗುತ್ತಿದ್ದ ಪ್ರಶಸ್ತಿಯನ್ನು ಈಗ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ನೇತೃತ್ವದ ಸರ್ಕಾರ ‘ಅಸ್ಸಾಂ ಭೈಭವ್’ ಎಂದು ಮರುನಾಮಕರಣ ಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು