ಸರ್ಕಾರದ ಆದೇಶ ಸಂಖ್ಯೆ ಕಂಇ ೪೦೦ ಟಿಎನ್ಆರ್ ೨೦೨೧, ಸೆ.೨೮ರ ಪ್ರಸ್ತಾವನೆ, ಆದೇಶ ಭಾಗ ಮತ್ತು ಅನುಬಂಧಗಳಲ್ಲಿ ಹಾಗೂ ತಿದ್ದು ಪಡಿ ಸಂಖ್ಯೆ ಕಂಇ ೪೦೦ ಟಿಎನ್ಆರ್ ೨೦೨೧, ಅ. ೧ರಲ್ಲಿ ರಾಜ್ಯ ಸರ್ಕಾರವು ಘೋಷಿಸಿರುವ ರೂ. ೧ ಲಕ್ಷ ಪರಿಹಾರ ಪಡೆಯಲು ಪರಿಗಣಿಸುವ ಮೃತ ವ್ಯಕ್ತಿಯು ಬಿ.ಪಿ.ಎಲ್ ಕುಟುಂಬದ ‘ದುಡಿಯುವ’ ಸದಸ್ಯನಾಗಿರಬೇಕು ಎಂದು ಇರುವ ಕಡೆಗಳೆಲ್ಲೆಲ್ಲಾ ‘ದುಡಿಯುವ’ ಎಂಬ ಪದವನ್ನು ಕೈಬಿಟ್ಟು ‘ರಾಜ್ಯ ಸರ್ಕಾರವು ಘೋಷಿಸಿರುವ ರೂ. ೧ಲಕ್ಷ ಪರಿಹಾರ ಪಡೆಯಲು ಪರಿಗಣಿಸುವ ಮೃತ ವ್ಯಕ್ತಿಯು ಬಿ.ಪಿ.ಎಲ್ ಕುಟುಂಬದ ಸದಸ್ಯವಾಗಿರಬೇಕು’ ಎಂದು ಓದಿಕೊಳ್ಳತಕ್ಕದ್ದು.
ಯಾವುದೇ ವಯಸ್ಸಿನ ನಿಬಂಧನೆ ಇಲ್ಲದೆ ಕೋವಿಡ್೧೯ ವೈರಾಣು ಸೋಂಕಿನಿಂದಾಗಿ ಸದಸ್ಯರನ್ನು ಕಳೆದುಕೊಂಡಂತಹ ಬಡತನ ರೇಖೆಗಿಂತ ಕೆಲಗಿರುವ ಎಲ್ಲಾ ಕುಟುಂಬದ ಅರ್ಹ ಕಾನೂನು ಬದ್ಧ ವಾರಸುದಾರರಿಗೆ ರಾಜ್ಯ ಸರ್ಕಾರದ ರೂ. ೧ ಲಕ್ಷ ಆರ್ಥಿಕ ನೆರವನ್ನು ನೀಡತಕ್ಕದ್ದು.
ಉಳಿದಂತೆ ಸೆ.೨೮ರ ಆದೇಶ, ಮಾರ್ಗಸೂಚಿಗಳು ಹಾಗೂ ನ.೧ರ ತಿದ್ದುಪಡಿಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.