ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗಾಂಧಿ ಕುಟುಂಬವು ದೇಶವನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದು, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ‘ಗಾಂಧಿ ಪಟ್ಟವನ್ನು ಬಿಟ್ಟುಕೊಡಿ’ ಎಂದು ಒತ್ತಾಯಿಸಿದ್ದಾರೆ.
ಗುವಾಹಟಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿದ ಶರ್ಮಾ, ಅವರ ಮೊದಲ ಹಗರಣ ಗಾಂಧಿ ಪಟ್ಟದಿಂದ ಪ್ರಾರಂಭವಾಯಿತು. ಅವರು ಕೇವಲ ಪರಿವಾರದ ಮತ್ತು ದೇಶವನ್ನು ಒಡೆಯುವ ಕೆಲಸ ಮಾಡಿದರು. ಗಾಂಧಿ ಪಟ್ಟವನ್ನು ಬಿಟ್ಟುಕೊಡುವಂತೆ ನಾನು ರಾಹುಲ್ ಗಾಂಧಿಗೆ ವಿನಂತಿಸುತ್ತೇನೆ ಎಂದು ಹೇಳಿದರು.