ಕರ್ನೂಲ್: ಆಂಧ್ರಪ್ರದೇಶದ ವೈಎಸ್ ಆರ್ ಸಿ ಎಂಎಲ್ ಸಿ ಪೋತುಲ ಸುನೀತಾ ಅವರ ಸಹೋದರ ಪೂಜಾರಿ ರಾಮುಡು ಆಲಿಯಾಸ್ ಭೀಮಣ್ಣ ಅವರನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಲಾಗಿದೆ.
ಕರ್ನೂಲ್ ಜಿಲ್ಲೆಯ ತುಗ್ಗಲಿ ಪೊಲೀಸ್ ಠಾಣಾ ವ್ಯಾಪ್ತಿಯ ಆರ್ ಎಸ್ ಪೆಂಡೇಕಲ್ ಗ್ರಾಮದಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ. ಮಾನಸಿಕ ಅಸ್ವಸ್ಥರಾಗಿದ್ದ 57 ವರ್ಷದ ಫುಟ್ ಪಾತ್ ಮೇಲೆ ಮಲಗಿದ್ದ ವೇಳೆ ಅವರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ.
ಶನಿವಾರ ರಾತ್ರಿ 11.00 ಗಂಟೆ ಸುಮಾರಿನಲ್ಲಿ ರೈಲ್ವೆ ಜಂಕ್ಷನ್ನಲ್ಲಿ ರಾಮುಡು ಅವರ ಮೃತದೇಹ ಪತ್ತೆಯಾಗಿತ್ತು. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ರಾಮುಡು ಅವರ ಕಿರಿಯ ಸಹೋದರ ಪೂಜಾರಿ ಲೆನಿನ್, ಹತ್ಯೆಯಾದ ರಾಮುಡು ಅವಿವಾಹಿತರಾಗಿದ್ದರು ಮತ್ತು ಸುಮಾರು 30 ವರ್ಷಗಳ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ-ಲೆನಿನಿಸ್ಟ್)ದ ಪ್ರಮುಖ ಕಾರ್ಯಕರ್ತರಾಗಿದ್ದರು.
ಇನ್ನು ರಾಮುಡು ಅವರಿಗೆ ಯಾವುದೇ ಶತ್ರುಗಳಿಲ್ಲರಲಿಲ್ಲ. ಕೊಲೆಗೆ ಕಾರಣ ನಿಗೂಢವಾಗಿಯೇ ಉಳಿದಿದ್ದು, ಇದು ರಾಜಕೀಯ ಸೇಡಿನ ಪ್ರಕರಣವಲ್ಲ ಎಂದು ತುಗ್ಗಲಿ ಠಾಣೆ ಸಬ್ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ ಸ್ಪಷ್ಟಪಡಿಸಿದ್ದಾರೆ.