ವಿಶಾಖಪಟ್ಟಣ: ರಾಜ್ಯದ ವಿಜಯನಗರಂ ಜಿಲ್ಲೆಯ ಕೊತ್ತವಲಸ ಮಂಡಲಂನಲ್ಲಿ ಎರಡು ರೈಲುಗಳ ಮಧ್ಯೆ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿದ ಘಟನೆ ನಡೆದಿದೆ. ಹಲವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದ್ದು, ಅಗ್ನಿಶಾಮಕ ದಳ, ರೈಲ್ವೆ ಸಿಬ್ಬಂದಿ ಹಾಗೂ ಪೊಲೀಸರಿಂದ ರಕ್ಷಣಾ ಕಾರ್ಯ ಮುಂದುವರೆದಿದೆ.
ಮೂಲಗಳ ಪ್ರಕಾರ, ರಾಯಗಡಕ್ಕೆ ಹೋಗುವ ಪ್ಯಾಸೆಂಜರ್ ರೈಲು ಹಿಂಬದಿಯಿಂದ ಪಲಾಸ ಪ್ಯಾಸೆಂಜರ್ ರೈಲಿಗೆ ಡಿಕ್ಕಿ ಹೊಡೆದು ಎರಡು ಬೋಗಿಗಳು ಹಳಿತಪ್ಪಿದ್ದು, ಅಪಘಾತದ ನಂತರ, ಪಲಾಸ ಪ್ಯಾಸೆಂಜರ್ನ ಒಂದು ಕೋಚ್ ಮುಖ್ಯ ಮಾರ್ಗಕ್ಕೆ ಹಾರಿದ್ದು, ಅದೇ ಮಾರ್ಗದಲ್ಲಿ ಬರುತ್ತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ.
ದುರಂತ ಸಂದರ್ಭದಲ್ಲಿ ನೆರವಾಗಲು ರೈಲ್ವೆ ಇಲಾಖೆ ಹೆಲ್ಪ್ಲೈನ್ ಸಂಖ್ಯೆ ಬಿಡುಗಡೆ ಮಾಡಿದೆ
ಹೆಲ್ಪ್ಲೈನ್ ಸಂಖ್ಯೆ-08912746330, 08912744619 ಹೆಲ್ಪ್ಲೈನ್ ಸಂಖ್ಯೆ-8106053051; 8106053052 ಹೆಲ್ಪ್ಲೈನ್ ಸಂಖ್ಯೆ-8500041670; 8500041671