ನಂದ್ಯಾಲ್: ಭ್ರಷ್ಟಾಚಾರ ಪ್ರಕರಣದಲ್ಲಿ ಆಂಧ್ರ ಸಿಐಡಿಯಿಂದ ಶನಿವಾರ ಬಂಧಿಸಲ್ಪಟ್ಟಿರುವ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಪ್ರತಿಕ್ರಿಯೆ ನೀಡಿದ್ದಾರೆ.
ತೆಲುಗು ಜನರ ಹಿತಾಸಕ್ತಿ ಕಾಪಾಡಲು ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಹೇಳಿದ್ದಾರೆ. ಕಳೆದ 45 ವರ್ಷಗಳಿಂದ ನಾನು ನಿಸ್ವಾರ್ಥವಾಗಿ ತೆಲುಗು ಜನರ ಸೇವೆ ಮಾಡಿದ್ದೇನೆ. ತೆಲುಗು ಜನರ ಹಿತಾಸಕ್ತಿ ಕಾಪಾಡಲು ಪ್ರಾಣ ತ್ಯಾಗ ಮಾಡಲು ನಾನು ಸಿದ್ಧನಿದ್ದೇನೆ. ಆಂಧ್ರಪ್ರದೇಶಕ್ಕಾಗಿಸೇವೆ ಸಲ್ಲಿಸುವುದನ್ನು ಭೂಮಿಯ ಮೇಲಿನ ಯಾವುದೇ ಶಕ್ತಿ ತಡೆಯಲು ಸಾಧ್ಯವಿಲ್ಲ ಎಂದು ಎಕ್ಸ್ ಮಾಡಿದ್ದಾರೆ.
ನಂದ್ಯಾಲದಲ್ಲಿ ಬಂಧನದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನಾಯ್ಡು, ನಾನು ಯಾವುದೇ ತಪ್ಪು ಮಾಡಿಲ್ಲ. ನಿನ್ನೆ ರಾತ್ರಿ ಪೊಲೀಸರು ಬಂದು ಭಯದ ವಾತಾವರಣ ಸೃಷ್ಟಿಸಿದರು. ಬಂಧನಕ್ಕೆ ಕಾರಣ ನೀಡುವಂತೆ ಕೇಳಿದಾಗ ಸಾಕ್ಷ್ಯವನ್ನು ನೀಡಲು ಅವರು ವಿಫಲರಾಗಿದ್ದಾರೆ ಎಂದರು.
ಆಡಳಿತ ಪಕ್ಷವು ಹೇಗಾದರೂ ನನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲು ಇಂತಹ ಕ್ರಮ ಕೈಗೊಂಡಿದೆ ಎಂದರು.