News Karnataka Kannada
Sunday, May 05 2024
ಆಂಧ್ರಪ್ರದೇಶ

ಆಂಧ್ರಪ್ರದೇಶಕ್ಕಾಗಿ ಪ್ರಾಣತ್ಯಾಗಕ್ಕೂ ಸಿದ್ಧ: ಎನ್. ಚಂದ್ರಬಾಬು ನಾಯ್ಡು

Ready to sacrifice my life for Andhra Pradesh: N Chandrababu Naidu
Photo Credit : News Kannada

ನಂದ್ಯಾಲ್: ಭ್ರಷ್ಟಾಚಾರ ಪ್ರಕರಣದಲ್ಲಿ ಆಂಧ್ರ ಸಿಐಡಿಯಿಂದ ಶನಿವಾರ ಬಂಧಿಸಲ್ಪಟ್ಟಿರುವ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಪ್ರತಿಕ್ರಿಯೆ ನೀಡಿದ್ದಾರೆ.

ತೆಲುಗು ಜನರ ಹಿತಾಸಕ್ತಿ ಕಾಪಾಡಲು ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಹೇಳಿದ್ದಾರೆ. ಕಳೆದ 45 ವರ್ಷಗಳಿಂದ ನಾನು ನಿಸ್ವಾರ್ಥವಾಗಿ ತೆಲುಗು ಜನರ ಸೇವೆ ಮಾಡಿದ್ದೇನೆ. ತೆಲುಗು ಜನರ ಹಿತಾಸಕ್ತಿ ಕಾಪಾಡಲು ಪ್ರಾಣ ತ್ಯಾಗ ಮಾಡಲು ನಾನು ಸಿದ್ಧನಿದ್ದೇನೆ. ಆಂಧ್ರಪ್ರದೇಶಕ್ಕಾಗಿಸೇವೆ ಸಲ್ಲಿಸುವುದನ್ನು ಭೂಮಿಯ ಮೇಲಿನ ಯಾವುದೇ ಶಕ್ತಿ ತಡೆಯಲು ಸಾಧ್ಯವಿಲ್ಲ ಎಂದು ಎಕ್ಸ್‌ ಮಾಡಿದ್ದಾರೆ.

ನಂದ್ಯಾಲದಲ್ಲಿ ಬಂಧನದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನಾಯ್ಡು, ನಾನು ಯಾವುದೇ ತಪ್ಪು ಮಾಡಿಲ್ಲ. ನಿನ್ನೆ ರಾತ್ರಿ ಪೊಲೀಸರು ಬಂದು ಭಯದ ವಾತಾವರಣ ಸೃಷ್ಟಿಸಿದರು. ಬಂಧನಕ್ಕೆ ಕಾರಣ ನೀಡುವಂತೆ ಕೇಳಿದಾಗ ಸಾಕ್ಷ್ಯವನ್ನು ನೀಡಲು ಅವರು ವಿಫಲರಾಗಿದ್ದಾರೆ ಎಂದರು.

ಆಡಳಿತ ಪಕ್ಷವು ಹೇಗಾದರೂ ನನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲು ಇಂತಹ ಕ್ರಮ ಕೈಗೊಂಡಿದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು