News Karnataka Kannada
Wednesday, May 01 2024
ದೆಹಲಿ

ಜಿ 20- ಶೃಂಗಸಭೆ: ಇಂಡಿಯಾ ಬದಲಿಗೆ ‘ಭಾರತ್’ ಹೆಸರಿನ ನಾಮಫಲಕ ಪ್ರದರ್ಶನ

G20 Summit: 'Bharat' logo displayed instead of India
Photo Credit : News Kannada

ಹೊಸದಿಲ್ಲಿ: ಜಿ.20 ಶೃಂಗಸಭೆಯಲ್ಲಿ ರಾಷ್ಟ್ರ ಪತಿ ನೀಡಿದ ಆಮಂತ್ರಣ ಪತ್ರದಲ್ಲಿ ಇಂಡಿಯಾ ಬದಲಿಗೆ ಭಾರತ ಎಂಬ ಒಕ್ಕಣೆ ದೇಶದೆಲ್ಲೆಡೆ ಗದ್ದಲಕ್ಕೆ ಕಾರಣವಾಗಿತ್ತು. ಇದೀಗ ಪ್ರಧಾನಿ ನೇತೃತ್ವದಲ್ಲಿ ನಡೆಯುತ್ತಿರುವ ಶೃಂಗಸಭೆಯ ನೇಮ್‌ ಪ್ಲೇಟ್‌ ನಲ್ಲಿ ಇಂಡಿಯಾ ಹೆಸರಿನ ಬದಲಿಗೆ ಭಾರತ ಎಂದು ನಮೂದಿಸಲಾಗಿದೆ.

ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಇಂಡಿಯಾ ಹೆಸರನ್ನು ಭಾರತ್‌ ಎಂದು ಮರುನಾಮಕರಣ ಮಾಡಲು ಸಿದ್ಧತೆ ನಡೆದಿದ್ದು, ಈ ನಿಟ್ಟಿನಲ್ಲಿ ಇಂದಿನ ಬದಲಾವಣೆ ಮಹತ್ವ ಪಡೆದಿದೆ.

ಅಲ್ಲದೆ G20 ಶೃಂಗಸಭೆಗೆ ಆಗಮಿಸಿದ ವಿದೇಶದ ಪ್ರತಿನಿಧಿಗಳಿಗೆ ನೀಡಲಾದ ಪುಸ್ತಕದಲ್ಲಿ “ಭಾರತ್, ಪ್ರಜಾಪ್ರಭುತ್ವದ ತಾಯಿ”. “ಭಾರತ್ ಎಂಬುದು ದೇಶದ ಅಧಿಕೃತ ಹೆಸರು. ಇದನ್ನು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ” ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಈ ವಿಚಾರವಾಗಿ ಕೇಂದ್ರದ ವಿರುದ್ಧ ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ. ನರೇಂದ್ರ ಮೋದಿ ಸರ್ಕಾರ “ಇತಿಹಾಸವನ್ನು ತಿರುಚಿ ಭಾರತವನ್ನು ವಿಭಜಿಸಿದೆ” ಎಂದು ಇಂಡಿಯಾ ಬ್ಲಾಕ್ ಸದಸ್ಯರು ಆರೋಪಿಸಿದ್ದಾರೆ.

ಪ್ರತಿದಾಳಿ ನಡೆಸಿದ ಬಿಜೆಪಿ ನಾಯಕರು ಪ್ರತಿಪಕ್ಷಗಳು ರಾಷ್ಟ್ರ ವಿರೋಧಿಯಾಗಿದ್ದು, ಸಂವಿಧಾನ ವಿರೋಧಿ ಎಂದು ಆರೋಪಿಸಿದೆ. ಅಲ್ಲದೆ ಸಂವಿಧಾನದ 1 ನೇ ಪರಿಚ್ಛೇದ ಓದುವಂತೆ ಸೂಚಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು