News Karnataka Kannada
Friday, May 10 2024
ಹುಬ್ಬಳ್ಳಿ-ಧಾರವಾಡ

ಜ್ಯಾತ್ಯಾತೀತ ಎಂದು ಹೆಸರಿಟ್ಟುಕೊಂಡು‌ ಕೋಮುವಾದಿಗಳ ಜೊತೆ ಸೇರಿದ್ದಾರೆ: ಸಿದ್ದರಾಮಯ್ಯ ಟಾಂಗ್‌

JD(S) has no ideology: Siddaramaiah
Photo Credit : News Kannada

ಹುಬ್ಬಳ್ಳಿ :  ಜ್ಯಾತ್ಯಾತೀತ ಎಂದು ಹೆಸರಿಟ್ಟುಕೊಂಡು‌ ಕೋಮುವಾದಿಗಳ ಜೊತೆ ಸೇರಿದ್ದಾರೆ. ದೇವೆಗೌಡರು ಯಾವ ಪಕ್ಷದ ಜೊತೆ ಹೊಂದಾಣಿಕೆ ಇಲ್ಲ ಅಂತಿದ್ರು ಇದೀಗ ಜಿಟಿ ದೇವೆಗೌಡ ಜೊತೆ ಪಕ್ಷದ ಉಳಿವಿಗೆ ಸೇರಿದ್ದೇವೆ ಅಂತಾ ಹೇಳುತ್ತಿದ್ದಾರೆ.  ಅಂದರೆ ಇವರಿಗೆ ಯಾವ ಸಿದ್ದಾಂತ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕೋಸ್ಕರ ಏನು ಬೇಕಾದರೂ ಮಾಡುತ್ತಾರೆ. ಯಾವ ಸಿದ್ದಾಂತ ಇಲ್ಲ ಏನಿಲ್ಲ. ಅಗಸ್ಟ್ ನಲ್ಲಿ ಸ್ವಲ್ಪ ಮಳೆ ಕೊರತೆಯಾಯ್ತು. ಪಂಪಸೆಟ್ ಬಳಕೆ ಹೆಚ್ಚಾಯ್ತು, ಹೀಗಾಗಿ ವಿದ್ಯುತ್ ಹೆಚ್ಚು ಬಳಕೆ ಆಯ್ತು. ನಾವು ವಿದ್ಯುತ್ ಖರೀದಿ ಮಾಡಿ ಪೂರೈಕೆ ಮಾಡಬೇಕಾಯ್ತು. ರೈತರಿಗೆ ಸ್ವಲ್ಪ ಸಮಸ್ಯೆ ಆಗಿದೆ ಎಂದರು. ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷರು ಅಲ್ಲ. ಅವರು ಅಧಿಕೃತ ವಿರೋಧ ಪಕ್ಷದ ನಾಯಕರು. ಅವರನ್ನು ಜಿ.20 ಶೃಂಗಸಭೆಗೆ ಕರೆಯದಿರೋದು ತಪ್ಪು. ನಾನು ಬೇರೆ ಕೆಲಸ ಇರೋ ಕಾರಣಕ್ಕೆ ಔತಣಕೂಟಕ್ಕೆ ಹೋಗತಿಲ್ಲ ಎಂದರು.

ಜೋಶಿ 3 ವರ್ಷ ಆಯ್ತು ಇದ್ದು ಮಹದಾಯಿ ಕುರಿತು ಏನು ಮಾಡಿದ್ರು:

ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ನಮಗೆ ಫಾರೆಸ್ಟ್ ಕ್ಲೀಯರೆನ್ಸ್ ಕೊಟ್ಟಿಲ್ಲ. ನಾವು ಯೋಜನೆ ಮಾಡಲು ರೆಡಿ ಇದ್ದೇವೆ.  ಜೋಶಿ ಅವರು  ಮೂರು ವರ್ಷಗಳಿಂದ ಏನು ಮಾಡುತ್ತಿದ್ದಾರೆ. ನಾವು ಪ್ರಧಾನಿಗಳೊಂದಿಗೆ ಸಭೆ ನಡೆಸಲು  ಸಮಯ ಕೇಳಿದ್ದೇವೆ ಎಂದು  ಸಿದ್ದರಾಮಯ್ಯ ಹೇಳಿದರು.

ಮಹದಾಯಿ ವಿಚಾರಕ್ಕೆ ಎಲ್ಲ ಪಕ್ಷಗಳ ಸಭೆ  ಸಬಂಧಿಸಿ ಸಮಯ ಕೊಡಿ ಎಂದು ಪ್ರಧಾನಿಗೆ ಪತ್ರ ಬರೆದಿದ್ದೇನೆ. 10 ದಿನದ ಹಿಂದೆ ಪತ್ರ ಬರೆದಿದ್ದೇನೆ ಆದರೆ ಉತ್ತರ ಕೊಡಲಿಲ್ಲ. ಬರಗಾಲ ಘೋಷಣೆ ಸಂಬಂಧಿಸಿ ನಿಯಮ ಬದಲಾವಣೆಗೆ ಪತ್ರ ಬರೆದಿದ್ದೇನೆ. ಅದಕ್ಕೆ ಉತ್ತರ ಕೊಟ್ಟಿಲ್ಲ. ಬರಗಾಲ  ನಾವು  ಘೋಷಣೆ ಮಾಡಿಯೇ ಮಾಡುತ್ತೇವೆ. ಆದರೆ ಕೇಂದ್ರ ಸರ್ಕಾರದ ನೆರವು ಬೇಕು.  ಈ ಕುರಿತು ನಿಯಮ ಬದಲಾವಣೆ ಮಾಡಿ ಅಂತಾ ಬರೆದಿದ್ದೇನೆ. ಅದನ್ನು ಇದುವರೆಗೂ ಮಾಡಿಲ್ಲ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು