ಆಂಧ್ರಪ್ರದೇಶ: ಆಂಧ್ರಪ್ರದೇಶದ ನರಸೀಪಟ್ಟಣಂನಲ್ಲಿರುವ ಎನ್ಟಿಆರ್ ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡ ಪರಿಣಾಮ ಇಲ್ಲಿನ ಆಸ್ಪತ್ರೆಗೆ ದಾಖಲಾಗಲು ಬಂದಿದ್ದರು. ಅಂದು ಸಂಜೆ ವೇಳೆಯಾಗಿದ್ದರಿಂದ ಸಂಪೂರ್ಣವಾಗಿ ಕತ್ತಲೆಯಾಗಿತ್ತು. ಆದರೆ, ಇಲ್ಲಿ ವಿದ್ಯುತ್ ಸರಬರಾಜು ವ್ಯವಸ್ಥೆ ಮತ್ತು ಜನರೇಟರ್ನಂತಹ ಬ್ಯಾಕಪ್ ಲಭ್ಯವಿರಲಿಲ್ಲ.
ಇಲ್ಲಿ ವಿದ್ಯುತ್ ಸರಬರಾಜು ಇಲ್ಲದ ಕಾರಣ, ಕ್ಯಾಂಡಲ್ಗಳು, ಟಾರ್ಚ್ಲೈಟ್ ಮತ್ತು ಸೆಲ್ಫೋನ್ಗಳ ಬೆಳಕಿನ ಸಹಾಯದಿಂದ ಮಹಿಳೆಗೆ ಹೆರಿಗೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಈ ವೇಳ ಎಚ್ಚೆತ್ತುಕೊಂಡ ದಾದಿಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳು ತಡ ಮಾಡದೇ ಹೆರಿಗೆ ಮಾಡಲು ಮುಂದಾದರು. ಪತಿಗೆ ಹೇಳಿದಂತೆ ತುರ್ತಾಗಿ ಸಾಧ್ಯವಾದಷ್ಟು ಸೆಲ್ಫೋನ್ಗಳು, ಕ್ಯಾಂಡಲ್ಗಳು ಮತ್ತು ಟಾರ್ಚ್ಲೈಟ್ಗಳನ್ನು ವ್ಯವಸ್ಥೆಗೊಳಿಸುವಂತೆ ತಿಳಿಸಿದರು. ನಂತರ ಎಲ್ಲದರ ವ್ಯವಸ್ಥೆಯ ನಡುವೆ ಮಹಿಳೆಗೆ ಹೆರಿಗೆ ಮಾಡಲಾಗಿದೆ.
ಇನ್ನೂ, ಅದೃಷ್ಟವಶಾತ್ ಯಾವುದೇ ತೊಡಕುಗಳಿಲ್ಲದೆ ಮಗು ಜನಿಸಿದ್ದು, ತಾಯಿ-ಮಗು ಇಬ್ಬರೂ ಕ್ಷೇಮವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಬುಧವಾರ ಮತ್ತು ಗುರುವಾರದ ಮಧ್ಯರಾತ್ರಿಯಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ವಿದ್ಯುತ್ ಕಡಿತಗೊಂಡಿರುವ ಘಟನೆ ವರದಿಯಾಗಿದೆ.