ಕೇಂದ್ರ ಸಚಿವೆ ಸ್ಮೃತಿ ಇರಾನಿ ತಮ್ಮ ಚೊಚ್ಚಲ ಕಾದಂಬರಿ ‘ಲಾಲ್ ಸಲಾಮ್’ (Lal Salaam) ಮೂಲಕ ಲೇಖಕಿಯಾಗಿದ್ದಾರೆ.
ವೆಸ್ಟ್ಲ್ಯಾಂಡ್ ಪ್ರಕಾಶನ ಸಂಸ್ಥೆ ಈ ಕಾದಂಬರಿಯನ್ನು ಪ್ರಕಟಿಸಲಿದೆ.
2010ರ ಏಪ್ರಿಲ್ ತಿಂಗಳಲ್ಲಿ ದಾಂತೇವಾಡದಲ್ಲಿ 76 ಸಿಆರ್ಪಿಎಫ್ ಸಿಬ್ಬಂದಿಗಳ ದುರಂತ ಹತ್ಯೆಯಿಂದ ಸ್ಫೂರ್ತಿ ಪಡೆದು ಈ ಕಾದಂಬರಿಯನ್ನು ರಚಿಸಲಾಗಿದೆ.
ದೇಶಕ್ಕೆ ಜೀವಮಾನದ ಸೇವೆಯನ್ನು ನೀಡಿದ ಅಸಾಧಾರಣ ಪುರುಷರು ಮತ್ತು ಮಹಿಳೆಯರಿಗೆ ಗೌರವ ಸಲ್ಲಿಸಲು ಈ ಕಾದಂಬರಿ ಬರೆಯಲಾಗಿದೆ. ನವೆಂಬರ್ 29ರಂದು ಈ ಕಾದಂಬರಿ ಮಾರುಕಟ್ಟೆಗೆ ಬರಲಿದೆ.
ಕೆಲವು ವರ್ಷಗಳಿಂದ ಈ ಕಥೆಯು ನನ್ನ ಮನಸ್ಸಿನಲ್ಲೇ ಹುದುಗಿತ್ತು. ಓದುಗರು ನನ್ನ ಕಾದಂಬರಿಯ ನಿರೂಪಣೆಯನ್ನು ಆನಂದಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಸ್ಮೃತಿ ಇರಾನಿ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.
ಲಾಲ್ ಸಲಾಮ್ ಓರ್ವ ಯುವ ಅಧಿಕಾರಿ ವಿಕ್ರಮ್ ಪ್ರತಾಪ್ ಸಿಂಗ್ನ ಕಥೆಯಾಗಿದೆ. ವಿಕ್ರಮ್ ಸಿಂಗ್ ರಾಜಕಾರಣ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿರುವ ವ್ಯವಸ್ಥೆಯಲ್ಲಿ ಸಿಲುಕಿ ಯಾವ ರೀತಿ ಸವಾಲುಗಳನ್ನು ಎದುರಿಸುತ್ತಾನೆ ಎಂಬುದು ಆಗಿದೆ.
ವೇಗದ ಗತಿಯ ಥ್ರಿಲ್ಲರ್ನ ಎಲ್ಲಾ ಅಂಶಗಳನ್ನು ಹೊಂದಿರುವ ಕಾದಂಬರಿ, ವೇಗ, ಆಕ್ಷನ್, ಸಸ್ಪೆನ್ಸ್, ಸ್ಮರಣೀಯ ಪಾತ್ರಗಳು ಮತ್ತು ಸನ್ನಿವೇಶಗಳು ‘ಲಾಲ್ ಸಲಾಮ್’ ಕಾದಂಬರಿಯ ಪ್ರಮುಖ ಅಂಶಗಳಾಗಿದ್ದು, ಪ್ರಾರಂಭದಿಂದ ಕೊನೆಯವರೆಗೆ ಓದುಗರನ್ನು ಹಿಡಿದಿಟ್ಟುಕೊಳ್ಳುತ್ತದೆ ಎಂದು ವೆಸ್ಟ್ ಲ್ಯಾಂಡ್ ಪ್ರಕಾಶಕರಾದ ವಿ.ಕೆ. ಕಾರ್ತಿಕಾ ಹೇಳಿದ್ದಾರೆ.
Unveiling Lal Salaam !
You can pre-order here: https://t.co/Hukqbqm1aq pic.twitter.com/2LHLT2ueFx
— Smriti Z Irani (Modi Ka Parivar) (@smritiirani) November 17, 2021