News Karnataka Kannada
Saturday, May 04 2024
ದೇಶ

ಭಾರತದಲ್ಲಿ ಸಂಪತ್ತಿನ ಅಸಮಾನತೆ ತಾಂಡವ

Money
Photo Credit :

ಹೊಸದಿಲ್ಲಿ: ರಾಷ್ಟ್ರೀಯ ಮಾದರಿ ಸಮೀಕ್ಷೆ (ಎನ್‌ಎಸ್‌ಎಸ್‌) ಸಂಸ್ಥೆಯು ‘ದಿ ಆಲ್‌ ಇಂಡಿಯಾ ಡೆಟ್‌ ಆ್ಯಂಡ್‌ ಇನ್ವೆಸ್ಟ್‌ಮೆಂಡ್‌ ಸರ್ವೇ- 2019’ ಎಂಬ ಸಮೀಕ್ಷೆಯ ವರದಿ ಬಿಡುಗಡೆ ಮಾಡಿದೆ.ಅದರಲ್ಲಿ, ‘ದೇಶದಲ್ಲಿ ಸಂಪತ್ತಿನ ಅಸಮಾನತೆ ತಾಂಡವವಾಡುತ್ತಿದೆ. ದೇಶದ ಅರ್ಧದಷ್ಟು ಆಸ್ತಿಯನ್ನು ಕೇವಲ ಶೇ.10ರಷ್ಟು ಮಂದಿ ಹೊಂದಿದ್ದಾರೆ. ಆದರೆ, ದೇಶದ ಶೇ.10ರಷ್ಟು ಆಸ್ತಿಯನ್ನು ಶೇ.50ರಷ್ಟು ಜನ ಹೊಂದಿದ್ದಾರೆ’ ಎಂದು ತಿಳಿಸಿದೆ.

ದೇಶದಲ್ಲಿ ಸಂಪತ್ತಿನ ಅಸಮಾನತೆ ಅಲಲ್ಲಿ ಚರ್ಚೆಯಾಗುತ್ತಿರುತ್ತವೆ. ಅದೇ ರೀತಿ‌ ಇಲ್ಲಿನ‌ ಸಂಪತ್ತು ಕೇವಲ ಒಂದು ವರ್ಗದ ಜನರಲ್ಲಿ ಮಾತ್ರ ಇರುತ್ತವೆ. ಇದಕ್ಕೆ ಪುಷ್ಟಿ ನೀಡುವಂತೆ ಸಂಪತ್ತಿನ ಹಂಚಿಕೆ ಕುರಿತು ಸರಕಾರವೇ ಸಮೀಕ್ಷೆ ನಡೆಸಿದ್ದು, ದೇಶದ ಶೇ.50ರಷ್ಟು ಸಂಪತ್ತು ಕೇವಲ ಶೇ.10ರಷ್ಟು ಶ್ರೀಮಂತರ ಸ್ವತ್ತಾಗಿದೆ ಎಂಬುದು ಬಹಿರಂಗವಾಗಿದೆ.ರಾಷ್ಟ್ರೀಯ ಮಾದರಿ ಸಮೀಕ್ಷೆ (ಎನ್‌ಎಸ್‌ಎಸ್‌) ಸಂಸ್ಥೆಯು ‘ದಿ ಆಲ್‌ ಇಂಡಿಯಾ ಡೆಟ್‌ ಆ್ಯಂಡ್‌ ಇನ್ವೆಸ್ಟ್‌ಮೆಂಡ್‌ ಸರ್ವೇ- 2019’ ಎಂಬ ಸಮೀಕ್ಷೆಯ ವರದಿ ಬಿಡುಗಡೆ ಮಾಡಿದ್ದು ಅದರಲ್ಲಿ, ‘ದೇಶದಲ್ಲಿ ಸಂಪತ್ತಿನ ಅಸಮಾನತೆ ತಾಂಡವವಾಡುತ್ತಿದೆ. ದೇಶದ ಅರ್ಧದಷ್ಟು ಆಸ್ತಿಯನ್ನು ಕೇವಲ ಶೇ.10ರಷ್ಟು ಮಂದಿ ಹೊಂದಿದ್ದಾರೆ. ಆದರೆ, ದೇಶದ ಶೇ.10ರಷ್ಟು ಆಸ್ತಿಯನ್ನು ಶೇ.50ರಷ್ಟು ಜನ ಹೊಂದಿದ್ದಾರೆ’ ಎಂದು ತಿಳಿಸಿದೆ.

ಗ್ರಾಮೀಣ ಕುಟುಂಬಗಳ ಸರಾಸರಿ ಸಾಲ ₹60,000: ನಗರದಲ್ಲಿ ₹1.2 ಲಕ್ಷ ಸಾಲನಗರ ಪ್ರದೇಶದ ಭೌತಿಕ ಹಾಗೂ ನಗದು ಸಂಪತ್ತಿನಲ್ಲಿ ಶೇ.55.7 ರಷ್ಟು ಆಸ್ತಿಯು ಕೇವಲ ಶೇ.10ರಷ್ಟು ಸಿರಿವಂತರ ಬಳಿ ಇದೆ. ಹಾಗೆಯೇ ಗ್ರಾಮೀಣ ಪ್ರದೇಶದಲ್ಲಿ ಇಷ್ಟೇ ಶ್ರೀಮಂತರ ಬಳಿ ಶೇ.50.8ರಷ್ಟು ಆಸ್ತಿಯಿದೆ. ನಗರದ ಒಟ್ಟು 276.6 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿಯಲ್ಲಿ ಶೇ.10ರಷ್ಟು ಜನ 139.6 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಇದೇ ರೀತಿ, ಗ್ರಾಮೀಣ ಪ್ರದೇಶದ ಒಟ್ಟು 238.1 ಲಕ್ಷ ಕೋಟಿ ರೂ. ಮೌಲ್ಯದ ಸಂಪತ್ತಿನಲ್ಲಿ ಶೇ.10 ರಷ್ಟು ಸಿರಿವಂತರು 132.5 ಲಕ್ಷ ಕೋಟಿ ರೂ. ಮೌಲ್ಯದ ಸಂಪತ್ತು ಹೊಂದಿದ್ದಾರೆ ಎಂದು ಮಾಹಿತಿ ನೀಡಿದೆ.ಕುಟುಂಬಗಳು ಹೊಂದಿರುವ ವಿತ್ತೀಯ ಮೌಲ್ಯದ ಆಧಾರದ ಮೇಲೆ 2019ರ ಜನವರಿಯಿಂದ ಡಿಸೆಂಬರ್‌ವರೆಗೆ ಸಮೀಕ್ಷೆ ನಡೆಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು