News Karnataka Kannada
Thursday, May 09 2024
ದೇಶ

ಪಕ್ಷಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಸಂಗ್ರಹವಾಗದ ದೇಣಿಗೆ, ಅಧಿಕ ವ್ಯಚ್ಚಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ನಿರ್ಧಾರ

Congress Highcommand 22 7 21
Photo Credit :
ಹೊಸದಿಲ್ಲಿ: ಪಕ್ಷಕ್ಕೆ ವಿವಿಧ ಮೂಲಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ದೇಣಿಗೆ ಸಂಗ್ರಹವಾಗದ ಹಿನ್ನೆಲೆಯಲ್ಲಿ ಪಕ್ಷದ ಸಂಸದರಿಂದಲೇ ದೇಣಿಗೆ ಸಂಗ್ರಹಿಸಲು  ಕಾಂಗ್ರೆಸ್‌ ಪಕ್ಷ ತೀರ್ಮಾನಿಸಿದೆ. ”ಪಕ್ಷದ ಸಂಸದರು ವಾರ್ಷಿಕ 50 ಸಾವಿರ ರೂ. ಕೊಡುಗೆ ನೀಡಬೇಕು,” ಎಂದು ಹೊಸ ಆದೇಶ ಹೊರಡಿಸಿದೆ.
”ವೆಚ್ಚ ಕಡಿತಗೊಳಿಸಲು ಪಕ್ಷ ತೀರ್ಮಾನಿಸಿದ್ದು, ಅಖಿಲ ಭಾರತ ಕಾಂಗ್ರೆಸ್‌ ಸಮಿತಿ (ಎಐಸಿಸಿ) ಕಾರ್ಯದರ್ಶಿಗಳು ಹಾಗೂ ಪ್ರಧಾನ ಕಾರ್ಯದರ್ಶಿಗಳ ಭತ್ಯೆಯನ್ನು 15 ಸಾವಿರ ರೂ. ನಿಂದ 12 ಸಾವಿರ ರೂ.ಗೆ ಇಳಿಸಲಾಗಿದೆ. ಅಲ್ಲದೆ, ವಿಮಾನದ ಟಿಕೆಟ್‌ ದರ ಹೆಚ್ಚಿದ್ದರೆ ನಾಯಕರು ರೈಲಿನಲ್ಲಿ
ಪ್ರಯಾಣ ಮಾಡಬೇಕು . 1400 ಕಿ.ಮೀ. ದೂರದ ರೈಲು ಪ್ರಯಾಣದ ದರವನ್ನು ಪಕ್ಷವು ಕೊಡಲಿದೆ .
ಜತೆಗೆ ಕ್ಯಾಂಟೀನ್‌, ವಿದ್ಯುತ್‌, ಇಂಧನ, ಪತ್ರಿಕೆ ಸೇರಿದಂತೆ ಸಾಧ್ಯವಾದಷ್ಟು ಖರ್ಚುಗಳನ್ನು ಕಡಿಮೆ ಮಾಡಿ,” ಎಂದು ಸೂಚಿಸಿದ್ದೇವೆ ಎಂಬುದಾಗಿ ಕಾಂಗ್ರೆಸ್‌ ಖಜಾಂಚಿ ಪವನ್‌ ಬನ್ಸಾಲ್‌ ಹೇಳಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಾಂಗ್ರೆಸ್ಸಿನ ದೇಣಿಗೆ ಸಂಗ್ರಹ ಭಾರಿ ಪ್ರಮಾಣದಲ್ಲಿ ಕುಸಿತವಾಗಿದೆ ಎಂದು ಇತ್ತೀಚಿನ ಚುನಾವಣೆ ಆಯೋಗ ವರದಿ ಹೇಳಿದೆ. ಇದರ ಬೆನ್ನಲ್ಲೇ ಪಕ್ಷವು ವೆಚ್ಚ ಕಡಿತಕ್ಕೆ ಮುಂದಾಗಿದೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು