ಈಗಾಗಲೇ ತಾಲಿಬಾನ್ ನಿಂದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ವಿಚಲಿತಗೊಂಡಿದೆ. ಆದರೆ ಅದೇ ಬಂಡುಕೋರರ ಗುಂಪು ಭಾರತದತ್ತ ಬರಲು ಧೈರ್ಯ ಮಾಡಿದರೆ, ಭಾರತ ಏರ್ ಸ್ಟ್ರೈಕ್ ಮಾಡೋಕೆ ಸಿದ್ಧವಾಗಿದೆ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಪ್ರಸ್ತುತ ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶ ಶಕ್ತಿಯುತವಾಗಿದೆ. ಯಾವುದೇ ದೇಶವು ಭಾರತದತ್ತ ಹಣ್ಣು ಹಾಕಲು ಧೈರ್ಯ ಮಾಡುತ್ತಿಲ್ಲ. ಈಗ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಾಲಿಬಾನ್ ನಿಂದ ಸಂಕಷ್ಟಕ್ಕೀಡಾಗಿದೆ. ತಾಲಿಬಾನ್ ಏನಾದರೂ ಭಾರತದೆಡೆಗೆ ಬಂದರೆ ಭಾರತ ಏರ್ ಸ್ಟ್ರೈಕ್ ಮಾಡಲು ಸಿದ್ಧವಾಗಿದೆ ಎಂದು ಆದರೆ ತಾಲಿಬಾನ್ ಗೆ ತಿಳಿದಿದೆ ಎಂದರು
ಬಿಜೆಪಿಯ ಉತ್ತರ ಪ್ರದೇಶ ಘಟಕದ ಹೇಳಿಕೆಯ ಪ್ರಕಾರ, ಇದೇ ವೇಳೆ ಸಿಎಂ ಆದಿತ್ಯನಾಥ್, ಎಸ್ಬಿಎಸ್ಪಿ ಮುಖ್ಯಸ್ಥ ಓಂ ಪ್ರಕಾಶ್ ರಾಜ್ಭರ್ ಅವರನ್ನು ಉಲ್ಲೇಖಿಸಿ, ಅವರ (ರಾಜ್ಭರ್) ಚಿಂತನೆ ಅವರ ಕುಟುಂಬದ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿದೆ ಎಂದು ಕಿಡಿಕಾರಿದರು.