ಪಂಜಾಬ್: ಪಂಜಾಬ್ʼನ ಜಲಿಯನ್ ವಾಲಾ ಬಾಗ್ ಸ್ಮಾರಕದ ನವೀಕೃತ ಸಂಕೀರ್ಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಜಲಿಯನ್ ವಾಲಾಬಾಗ್ನಲ್ಲಿ ನಡೆದ ಹತ್ಯಾಕಾಂಡ ಘಟನೆಗೂ ಮೊದಲು ಇದು ಪವಿತ್ರ ಸ್ಥಳವಾಗಿತ್ತು. ಜಲಿಯನ್ ವಾಲಾಬಾಗ್ ಸ್ಥಳ ಹತ್ಯಾಕಾಂಡದ ಸ್ಥಳ ಅಲ್ಲ. ಈ ಸ್ಮಾರಕ ಇಡೀ ವಿಶ್ವಕ್ಕೆ ಸ್ಫೂರ್ತಿ ಎಂದು ತಿಳಿಸಿದ್ದಾರೆ.
ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ. ನಾನು ನಮ್ಮ ಪರಂಪರೆಯನ್ನು ಉಳಿಸಬೇಕಾದ ಅಗತ್ಯವಿದೆ ಎಂದು ಮೋದಿ ಹೇಳಿದ್ದಾರೆ.ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಅನೇಕರು ಬಲಿಯಾಗಿದ್ದು, ಮುಗ್ಧ ಬಾಲಕರು, ಸಹೋದರರು, ಸಹೋದರಿಯರ ಕನಸು ಈಗಲೂ ಇಲ್ಲಿನ ಗೋಡೆಗಳಲ್ಲಿ ನಾಟಿರುವ ಬುಲೆಟ್ಗಳ ಮೇಲೆ ಕಾಣುತ್ತೇವೆ ಎಂದರು.
ಜಲಿಯನ್ ವಾಲಾಬಾಗ್ ಸ್ಮಾರಕವನ್ನು ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಅಜಾದ್ಗೆ ಸಮರ್ಪಿಸಲಾಗಿದೆ. ಇನ್ನೂ ಹಲವಾರು ಸ್ಮಾರಕಗಳ ನವೀಕರಣ ಪ್ರಗತಿಯಲ್ಲಿದ್ದು, ಭಾರತದ ಮೊದಲ ಸಂವಾದಾತ್ಮಕ ಗ್ಯಾಲರಿಯನ್ನು ಉತ್ತರಪ್ರದೇಶದ ಅಲಹಾಬಾದ್ನಲ್ಲಿ ನಿರ್ಮಿಸಲಾಗುತ್ತಿದೆ ಎಂದರು.
ದೇಶ ವಿಭಜನೆಯ ಸಮಯದಲ್ಲಿ ಭಾರತೀಯರು ಅನುಭವಿಸಿದ ನೋವು ಸಂಕಟಗಳನ್ನು ನೆನಪಿನಲ್ಲಿಟ್ಟುಕೊಂಡು ಆಗಸ್ಟ್ 14 ನ್ನು ವಿಭಜನೆಯ ಭಯಾನಕ ಸ್ಮರಣೆ ದಿನವೆಂದು ಆಚರಿಸಲಾಗುತ್ತಿದೆ. ಜಲಿಯನ್ ವಾಲಾಬಾಗ್ ಸರ್ದಾರ್ ಉದಮ್ ಸಿಂಗ್ ಮತ್ತು ಭಗತ್ ಸಿಂಗ್ರಂತಹ ಅಸಂಖ್ಯಾತ ಕ್ರಾಂತಿಕಾರಿಗಳಿಗೆ ದೇಶಧ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಲು ಧೈರ್ಯ ನೀಡಿದ ಸ್ಥಳವಾಗಿದೆ ಎಂದು ಹೇಳಿದರು.