ನವದೆಹಲಿ:ದೇಶದಲ್ಲಿ ಒಂದೇ ದಿನ 16,356 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಒಟ್ಟು ಕೊರೊನಾ ಪೀಡಿತರ ಸಂಖ್ಯೆ 3,41,59,562 ಕೋಟಿಗೆ ಏರಿಕೆಯಾಗಿದೆ. ಆದರೆ, ಒಂದೇ ದಿನ 666 ಮಂದಿ ಮಹಾಮಾರಿಗೆ ಬಲಿಯಾಗಿರುವುದರಿಂದ ಇದುವರೆಗೂ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 4,53,708 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕಳೆದ 233 ದಿನಗಳ ನಂತರ ಇದೇ ಮೊದಲ ಭಾರಿಗೆ ಸಕ್ರೀಯ ಸೋಂಕು ಪ್ರಕರಣಗಳ ಪ್ರಮಾಣ 1,73 ಲಕ್ಷಕ್ಕೆ ಕುಸಿದಿರುವುದು ಉತ್ತಮ ಬೆಳವಣಿಗೆಯಾಗಿದೆ.ಮಹಾಮಾರಿಗೆ ಬಲಿಯಾದ 666 ಮಂದಿಯಲ್ಲಿ 292 ಮಂದಿ ಕೇರಳದಲ್ಲೇ ಸಾವನ್ನಪ್ಪಿರುವುದು ಕಂಡು ಬಂದಿದೆ.
ಅದಾಗ್ಯೂ ಕಳೆದ 30 ದಿನಗಳಿಂದ ಪ್ರತಿನಿತ್ಯದ ಕೊರೊನ ಸೋಂಕಿನ ಸಂಖ್ಯೆ 30 ಸಾವಿರದೊಳಗೆ ದಾಖಲಾಗುತ್ತಿರುವುದು ಮುಂದುವರೆದಿದೆ.ದಿನೇ ದಿನೇ ರಾಷ್ಟ್ರೀಯ ಕೊರೊನಾ ಚೇತರಿಕೆ ಪ್ರಮಾಣ ಏರುಗತಿಯಲ್ಲಿ ಸಾಗುತ್ತಿದ್ದು, ಚೇತರಿಕೆ ಪ್ರಮಾಣ ಶೇ.98.16ಕ್ಕೆ ಹೆಚ್ಚಳವಾಗಿದೆ.
ದೇಶದಲ್ಲಿ ಕೊರೊನಾ ಲಸಿಕಾ ಅಭಿಯಾನ ಮುಂದುವರೆದಿದ್ದು ಇಲ್ಲಿಯವರೆಗೆ 101.30 ಕೋಟಿ ಮಂದಿಗೆ ಲಸಿಕೆ ಹಾಕಲಾಗಿದೆ.